
ತುಮಕೂರು: ತುಮಕೂರು ರನ್ನರ್ಸ್ ಕ್ಲಬ್ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ ಮಹಾದೇವಿ, ಸೈಯದ್ ಆಲಿಯಾ, ಶ್ರವಂತ್ ಗೌಡ ವೇಗದ ಓಟಗಾರರಾಗಿ ಹೊರಹೊಮ್ಮಿದರು.
ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ 5 ಕಿಲೊ ಮೀಟರ್, 10 ಕಿಲೊ ಮೀಟರ್ ಮತ್ತು 21 ಕಿಲೊ ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಓಟಗಾರರು ಪಾಲ್ಗೊಂಡಿದ್ದರು.
ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.
ಮಹಿಳೆಯರ ವಿಭಾಗ: 5 ಕಿಲೊ ಮೀಟರ್ ಓಟ– ಮಹಾದೇವಿ, ಭೀಮಾ ಬಾಯಿ, ಪುಣ್ಯ. 10 ಕಿ.ಮೀ– ಸೈಯದ್ ಆಲಿಯಾ ಶೇಖ್, ರಂಜನಾ, ಎಸ್.ಯು.ಸೌಮ್ಯಾ. 21 ಕಿ.ಮೀ– ಮಮತಾ ರಾವತ್, ಎಚ್.ಕೆ.ಅನುರಾಧ, ವೈಶಾಲಿ ಕುಲಕರ್ಣಿ.
ಪುರುಷರ ವಿಭಾಗ: 5 ಕಿಲೊ ಮೀಟರ್– ಶ್ರವಂತ್ ಗೌಡ, ಕೌಶಿಕ್, ಯೋಗಿಶ್ ದೇವಡಿಗ. 10 ಕಿ.ಮೀ– ರಾಜಶೇಖರ್ ದೊಡ್ಡಯ್ಯ, ಸುನಿಲ್ ಕರಿಯಪ್ಪ, ಸಿ.ಸಿದ್ದರಾಜು. 21 ಕಿ.ಮೀ– ಎಂ.ವೈ.ಸಂದೀಪ್ಕುಮಾರ್, ಎಸ್.ಗೌತಮ್, ಕೆ.ಜಿ.ಬಾಲಾಜಿ.
ಚಾಲನೆ: ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್ಗೆ ಚಾಲನೆ ನೀಡಲಾಯಿತು. ತುಮಕೂರು ರನ್ನರ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಸಿ.ಎಂ.ರವಿ, ಪದಾಧಿಕಾರಿಗಳಾದ ದರ್ಶನ್, ಸುನೀತಾ, ಸುಹಾಸ್, ಮುಖಂಡರಾದ ಚೆನ್ನಬಸವಪ್ರಸಾದ್, ರುದ್ರಪಕಾಶ್, ಅಮಿತ್, ಸತೀಶ್ ಮಲ್ಲಣ್ಣ, ಪರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.