ಕುಣಿಗಲ್: ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ಸಂಜೆ ನಡೆದ ಎರಡು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಹೇಮಾವತಿ ವೃತ್ತದಲ್ಲಿ ನಡೆದ ಅಪಘಾತದಲ್ಲಿ ಬಾಗಲಕೋಟೆಯ ಆನಂದ್ (23) ಮೃತಪಟ್ಟಿದ್ದಾರೆ. ತನ್ನ ಸಂಬಂಧಿಗಳೊಂದಿಗೆ ಎಡೆಯೂರಿಗೆ ಹೋಗಲು ಬಂದಿದ್ದು, ರಸ್ತೆಬದಿಯಲ್ಲಿ ನಡೆಯುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕಾರು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಎರಡನೇ ಪ್ರಕರಣದಲ್ಲಿ ಮೃತಪಟ್ಟವರು ಕೊಪ್ಪ ಗ್ರಾಮದ ಗಂಗಭೈರಯ್ಯ (45). ಮಾಗಡಿಪಾಳ್ಯ ಕ್ರಾಸ್ನಲ್ಲಿ ರಮೇಶ್ ಮತ್ತು ಗಂಗಭೈರಯ್ಯ ನಿಂತಿದ್ದು, ಹಾಸನ ಕಡೆಯಿಂದ ಬಂದ ಕಾರು ಗಂಗಭೈರಯ್ಯ ಅವರಿಗೆ ಡಿಕ್ಕಿ ಹೊಡೆದಿದೆ. ಚಿಕಿತ್ಸೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.