ಕೊರಟಗೆರೆ: ಕೆರೆಯಲ್ಲಿ ಸೊಪ್ಪು ತೊಳೆಯಲು ಹೋಗಿದ್ದ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ಧರ್ಮಪ್ರಕಾಶ್(35) ಹಾಗೂ ತುಮಕೂರು ತಾಲ್ಲೂಕು ಅಯ್ಯನಗುಡಿ ಗೊಲ್ಲಹಳ್ಳಿಯ ನಾಗರಾಜು(36) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಧರ್ಮಪ್ರಕಾಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸೊಪ್ಪನ್ನು ಮಾರಾಟ ಮಾಡುವ ಮುನ್ನ ನೀರಿನಲ್ಲಿ ತೊಳೆಯುವ ಸಲುವಾಗಿ ಸ್ನೇಹಿತ ನಾಗರಾಜುನನ್ನು ಕರೆದು ಕೊಂಡು ಥರಟಿ ಕೆರೆಗೆ ಹೋಗಿದ್ದಾರೆ. ಕೆರೆ ದಡದಲ್ಲಿ ಸೊಪ್ಪು ತೊಳೆಯುವಾಗ ಎರಡು ಕಟ್ಟು ಸೊಪ್ಪು ನೀರಿನಲ್ಲಿ ತೇಲಿಕೊಂಡು ಹೋಗಿದೆ. ಅದನ್ನು ತೆಗೆದುಕೊಳ್ಳಲು ಹೋದ ಈಜು ಬರದ ಧರ್ಮಪ್ರಕಾಶ್ ಮೊದಲು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತ ನಾಗರಾಜು ರಕ್ಷಿಸಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಸಿಪಿಐ ಎಫ್.ಕೆ.ನದಾಫ್, ಪಿಎಸ್ಐ ಬಿ.ಸಿ.ಮಂಜುನಾಥ ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.