ADVERTISEMENT

ಶಿರಾ ದೊಡ್ಡಕೆರೆಗೆ ನೀರು ಹರಿಸಿ

​ಪ್ರಜಾವಾಣಿ ವಾರ್ತೆ
Published 11 ಮೇ 2020, 17:10 IST
Last Updated 11 ಮೇ 2020, 17:10 IST
ಶಿರಾ ದೊಡ್ಡಕೆರೆಯನ್ನು ಶಾಸಕ ಬಿ.ಸತ್ಯನಾರಾಯಣ ಸೋಮವಾರ ವೀಕ್ಷಿಸಿದರು
ಶಿರಾ ದೊಡ್ಡಕೆರೆಯನ್ನು ಶಾಸಕ ಬಿ.ಸತ್ಯನಾರಾಯಣ ಸೋಮವಾರ ವೀಕ್ಷಿಸಿದರು   

ಶಿರಾ: ಕುಡಿಯುವ ನೀರಿಗಾಗಿ ಶಿರಾ ದೊಡ್ಡ ಕೆರೆಗೆ ತಕ್ಷಣ ಹೇಮಾವತಿ ನೀರು ಹರಿಸುವಂತೆ ಶಾಸಕ ಬಿ.ಸತ್ಯನಾರಾಯಣ ಒತ್ತಾಯಿಸಿದರು.

ನಗರಕ್ಕೆ ಕುಡಿಯುವ ನೀರು ಒದಗಿಸುವ ದೊಡ್ಡ ಕೆರೆಯನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು.

ಶಿರಾ ನಗರಕ್ಕೆ ಕುಡಿಯುವ ನೀರು ಒದಗಿಸುವ ದೊಡ್ಡ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ. ಪ್ರಸ್ಥುತ ಕೆರೆಯಲ್ಲಿರುವ ನೀರು ಒಂದು ತಿಂಗಳಲ್ಲಿ ಖಾಲಿಯಾಗುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ತಕ್ಷಣ ನೀರು ಹರಿಸಬೇಕು ಎಂದರು.

ADVERTISEMENT

ಮಾನವೀಯ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಿರಾಕ್ಕೆ ನೀರು ಹರಿಸಬೇಕು. ಹೇಮಾವತಿ ನೀರಿನ ಜತೆಗೆ ಮಳೆ ಬಂದರೆ ಇನ್ನು ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ಜೆಡಿಎಸ್ ಮುಖಂಡ ಮುಡಿಮಡು ರಂಗಶ್ವಾಮಯ್ಯ, ಆರ್.ರಾಘವೇಂದ್ರ, ಆರ್.ರಾಮು, ಕೋಟೆ ಮಹದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.