
ಪ್ರಜಾವಾಣಿ ವಾರ್ತೆಅಲೆವೂರು: ಅಲೆವೂರಿನ ಪ್ರಗತಿ ನಗರದಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದ ನೂರಾರು ವಲಸೆ ಕಾರ್ಮಿಕರು ತಮಗೂ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸಿ ರಾಜ್ಯ ವಲಸೆ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಅಲೆವೂರು ನೆಹರು ಪ್ರೌಢಶಾಲೆ ಸಮೀಪ ಮೌನ ಪ್ರತಿಭಟನೆ ನಡೆಸಿದರು.
`ನಾವು 30 ವರ್ಷದಿಂದ ಇಲ್ಲಿ ಜೀವಿಸುತ್ತಿದ್ದೇವೆ. ಈ ಬಗ್ಗೆ ತಹಶೀಲ್ದಾರರಿಗೆ ದಾಖಲೆಗಳನ್ನು ನೀಡಿದ್ದೇವೆ. 150 ಕುಟುಂಬಗಳಲ್ಲಿ 500 ಜನ ವಾಸಿಸುತ್ತಿದ್ದು ಕೇವಲ ನೂರು ಮಂದಿಗೆ ಮಾತ್ರ ಮತ ಚಲಾಯಿಸುವ ಹಕ್ಕಿದೆ. ಆದರೆ ಉಳಿದವರಿಗೆ ಮತಚಲಾಯಿಸುವ ಹಕ್ಕನ್ನು ಒದಗಿಸಿಲ್ಲ.
ನಮ್ಮ ಬೇಡಿಕೆಯನ್ನು ಈಡೇರಿಸಬೇಕು~ ಎಂದು ಪ್ರತಿಭಟನಾನಿರತ ಕಾರ್ಮಿಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಚೆನ್ನವೀರಪ್ಪ, ಬಸಪ್ಪ ಬಾಗಲಕೋಟೆ ಮತ್ತಿತರರು ಪಾಲ್ಗೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.