ಉಡುಪಿ: ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರ ಈ ಕೆಳಕಂಡಂತಿದೆ.
ಬೈಂದೂರು ಕ್ಷೇತ್ರ: ಕೆ. ಗೋಪಾಲ ಪೂಜಾರಿ– ಕಾಂಗ್ರೆಸ್, ಬಿ.ಎಂ. ಸುಕುಮಾರ ಶೆಟ್ಟಿ–ಬಿಜೆಪಿ, ಸುರೇಶ್ ಕಲ್ಲಗಾರ– ಸಿಪಿಎಂ, ಸಿ. ರವೀಂದ್ರ– ಜೆಡಿಎಸ್, ಮಂಜುನಾಥ ಕೆರಾಡಿ–ಜನಾತದಳ (ಯು), ಅಬ್ದುಲ್ ಹಜೀದ್– ಎಂಇಪಿ, ಸುರೇಶ್ ಪೂಜಾರಿ– ಸ್ವತಂತ್ರ, ಬಿ. ಸುಬ್ರಹ್ಮಣ್ಯ – ಸ್ವತಂತ್ರ, ಮರಕಾಲ ಮಂಜುನಾಥ– ಸ್ವತಂತ್ರ.
ಉಡುಪಿ ಕ್ಷೇತ್ರ: ಪ್ರಮೋದ್ ಮಧ್ವರಾಜ್– ಕಾಂಗ್ರೆಸ್, ಕೆ. ರಘುಪತಿ ಭಟ್– ಬಿಜೆಪಿ, ಗಂಗಾಧರ–ಜೆಡಿಎಸ್, ಮಧುಕರ ಮುದ್ರಾಡಿ– ಶಿವಸೇನೆ, ವಿಶ್ವನಾಥ– ಎಂಇಪಿ, ಸುಧೀರ್ ಕಾಂಚನ್–ಸ್ವತಂತ್ರ, ಶೇಖರ್ ಹಾವಂಜೆ– ಸ್ವತಂತ್ರ, ಮಹೇಶ್– ಸ್ವತಂತ್ರ.
ಕಾಪು ಕ್ಷೇತ್ರ: ವಿನಯಕುಮಾರ್ ಸೊರಕೆ– ಕಾಂಗ್ರೆಸ್, ಲಾಲಾಜಿ ಮೆಂಡನ್– ಬಿಜೆಪಿ, ಅನುಪಮಾ ಶೆಣೈ, ಭಾರತೀಯ ಜನಶಕ್ತಿ ಕಾಂಗ್ರೆಸ್, ಅಬ್ದುಲ್ ಇಬ್ರಾಹಿಂ– ಜೆಡಿಎಸ್, ಅಬ್ದುಲ್ ರಹಿಮಾನ್–ಎಂಇಪಿ.
ಕುಂದಾಪುರ ಕ್ಷೇತ್ರ: ರಾಕೇಶ್ ಮಲ್ಲಿ– ಕಾಂಗ್ರೆಸ್, ಹಾಲಾಡಿ ಶ್ರೀನಿವಾಸ ಶೆಟ್ಟಿ– ಬಿಜೆಪಿ, ರಾಜೀವ್ ಕೋಟ್ಯಾನ್–ಜನತಾದಳ (ಯು), ಎಸ್. ಪ್ರಕಾಶ್ ಶೆಟ್ಟಿ–ಜೆಡಿಎಸ್, ಸುಧಾಕರ–ಆರ್ಪಿಐ.
ಕಾರ್ಕಳ ಕ್ಷೇತ್ರ: ಎಚ್. ಗೋಪಾಲ ಭಂಡಾರಿ– ಕಾಂಗ್ರೆಸ್, ವಿ.ಸುನಿಲ್ ಕುಮಾರ್– ಬಿಜೆಪಿ, ಮಕ್ಸೂದ್ ಅಹಮ್ಮದ್– ಎಂಇಪಿ, ಉದಯ ಕುಮಾರ್–ಬಿಎಸ್ಪಿ, ಸಯ್ಯದ್ ಆರೀಫ್– ಸ್ವತಂತ್ರ, ಸುಮಂತ ಪೂಜಾರಿ–ಸ್ವತಂತ್ರ, ಅಬ್ದುಲ್ ಅಜೀಜ್– ಸ್ವತಂತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.