‘ನೀಲಿಯ ಬಾನಲಿ ಕರಿಮುಗಿಲೇ ನವಿಲಿನ ನೃತ್ಯಕೆ ಕರೆಯೋಲೆ’ ಎನ್ನುವುದು ಜನಪ್ರಿಯ ಚಿತ್ರಗೀತೆಯೊಂದರ ಸಾಲು. ಬಾನಲ್ಲಿ ಕರಿಮುಗಿಲು ಹರಡಿಕೊಂಡು, ಇಳೆಗೆ ತಂಪೆರೆಯುವ ಮಳೆಯ ಆಗಮನದ ನಿರೀಕ್ಷೆ ಎಲ್ಲೆಡೆ ಇರುವಾಗ ಗಂಗೊಳ್ಳಿಯ ನಿವೃತ್ತ ಸರ್ಕಾರಿ ಉದ್ಯೋಗಿ ರತ್ನಾಕರ ಗಂಗೊಳ್ಳಿ ಅವರ ಮನೆಯ ಮಾಡಿನ ಮೇಲೆ ತ್ರಿವಳಿ ನವಿಲು ತದೇಕ ದೃಷ್ಟಿಯಿಂದ ಆ ಕರೆಯೋಲೆಯ ನಿರೀಕ್ಷೆಯಲ್ಲಿರಬಹುದೇ ಎನ್ನಿಸುವಂತಿದೆ ಗಂಗೊಳ್ಳಿಯ ಛಾಯಾಗ್ರಹಕ ಗಣೇಶ ಪಿ. ಅವರು ಸೆರೆಹಿಡಿದಿರುವ ಈ ದೃಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.