ADVERTISEMENT

ಆಗುಂಬೆ ಘಾಟಿ ಅಪಘಾತ: ಗಾಯಗೊಂಡಿದ್ದ ಸಹಸವಾರೆ ಮೃತ್ಯು

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 16:17 IST
Last Updated 19 ಜೂನ್ 2023, 16:17 IST
ನಿರ್ಮಿತಾ
ನಿರ್ಮಿತಾ   

ಹೆಬ್ರಿ: ಆಗುಂಬೆ ಘಾಟಿಯ 13ನೇ ತಿರುವಿನಲ್ಲಿ ಬೈಕ್ ಹಾಗೂ ಬಸ್ ಮಧ್ಯೆ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹಸವಾರೆ ನಿರ್ಮಿತಾ(19) ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಒಂದೇ ಕುಟುಂಬದ ಶಶಾಂಕ್ ಬಂಗೇರ ಹಾಗೂ ನಿರ್ಮಿತಾ ಭಾನುವಾರ ಆಗುಂಬೆ ಸೂರ್ಯಸ್ತಮಾನ ವೀಕ್ಷಣೆ ಮಾಡಿ ವಾಪಸ್ ತೆರಳುತ್ತಿರುವಾಗ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಶಶಾಂಕ್ ಸ್ಥಳದಲ್ಲೇ ಮೃತಪಟ್ಟು, ಗಂಭೀರ ಗಾಯಗೊಂಡಿದ್ದ ನಿರ್ಮಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು.

ಕುಟುಂಬದಲ್ಲಿ ಶೋಕದ ವಾತಾವರಣ: ಒಂದೇ ಕುಟುಂಬದ ಎರಡು ಜನರನ್ನು ಕಳೆದುಕೊಂಡಿರುವ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ನಿರ್ಮಿತ ಪಿಯುಸಿ ಶಿಕ್ಷಣ ಮುಗಿಸಿ ಪದವಿ ಕಾಲೇಜಿಗೆ ಸೇರಲು ಸಿದ್ಧತೆ ನಡೆಸಿದ್ದಳು. ಡಿಪ್ಲೋಮಾ ಪದವಿ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಶಾಂಕ್ ಇತ್ತೀಚಿಗೆ ಊರಿಗೆ ಬಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.