ಬಾರ್ಕೂರು (ಬ್ರಹ್ಮಾವರ): ಬಾರ್ಕೂರಿನ ಪುಣ್ಯ ತೀರ್ಥ ಕ್ಷೇತ್ರ ಕೂಡ್ಲಿ ಜನಾರ್ದನ ದೇವಸ್ಥಾನದ 30ನೇ ವರ್ಷದ ಪ್ರತಿಷ್ಠಾ ವರ್ಧoತ್ಯುತ್ಸವ ಭಾನುವಾರ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಕೆ.ಗಣಪತಿ ಉಡುಪ ಪೌರೋಹಿತ್ಯದಲ್ಲಿ ಜನಾರ್ದನ ದೇವರಿಗೆ ರಂಗಪೂಜೆ ಸೇವೆ ನಡೆಯಿತು. ಕೂಡ್ಲಿ ದುರ್ಗಾಂಬ ಗದ್ದುಗೆ ಅಮ್ಮ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ ನೆರವೇರಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ವೆಂಕಟರಮಣ ಉಡುಪ, ಉತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ ಉಡುಪ, ಬಿ.ಶ್ರೀನಿವಾಸ ಶೆಟ್ಟಿಗಾರ್, ಕೆ.ಜಗನ್ನಾಥ ನಾಯ್ಕ, ಕೆ.ರಾಮಕೃಷ್ಣ ಅಡಿಗ, ಕೆ.ಮಂಜುನಾಥ ನಾಯ್ಕ, ಕೆ.ಚರಡ ನಾಯ್ಕ, ಕೆ.ಅಖಿಲೇಷ್ ನಾಯಕ್, ಸುದರ್ಶನ ಉಡುಪ, ಸೀತಾರಾಮ ಶಾಸ್ತ್ರಿ, ಗಿರಿಜಾ ಎಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.