ADVERTISEMENT

ಹಿರಿಯ ನಾಗರಿಕರ ವೇದಿಕೆಗೆ ಅಧ್ಯಕ್ಷರಾಗಿ ಗಿರೀಶ್ ಶ್ಯಾನುಭಾಗ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 14:39 IST
Last Updated 24 ಡಿಸೆಂಬರ್ 2024, 14:39 IST
ಗಿರೀಶ್ ಶ್ಯಾನುಭಾಗ್ ಬಿಜೂರು
ಗಿರೀಶ್ ಶ್ಯಾನುಭಾಗ್ ಬಿಜೂರು   

ಬೈಂದೂರು: ಇಲ್ಲಿನ ಹಿರಿಯ ನಾಗರಿಕರ ವೇದಿಕೆಗೆ 2025–26ನೇ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಗಿರೀಶ್ ಶ್ಯಾನುಭಾಗ್ ಬಿಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಶಿರೂರು ಪುನರ್‌ ಆಯ್ಕೆಗೊಂಡಿದ್ದಾರೆ.

ಇಲ್ಲಿನ ಮಹಾಂಕಾಳಿ ದೇವಸ್ಥಾನದಲ್ಲಿ ಜರುಗಿದ ಹಿರಿಯ ನಾಗರಿಕ ವೇದಿಕೆಯ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೋವಿಂದ ಎಂ ಗೌರವಾಧ್ಯಕ್ಷ, ಜಿ. ಈಶ್ವರ ಉಪಾಧ್ಯಕ್ಷ, ಸತೀಶ ವಾಮನ ಪೈ ನಂದನವನ ಕೋಶಾಧಿಕಾರಿ, ರಾಜೀವಿ ಎಂ. ಜೊತೆ ಕಾರ್ಯದರ್ಶಿ, ಸಲಹಾ ಸಮಿತಿಯ ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷ ಕೆ. ಪುಂಡಲೀಕ ನಾಯಕ್, ಉಪಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ರಾಮ ಶೇರುಗಾರ್, ನಾಗೂರು ಗೋವಿಂದ್ರಾಯ ಪೈ, ಜಿ. ತಿಮ್ಮಪ್ಪಯ್ಯ, ಸಂಜೀವ ಆಚಾರ್, ಐ. ನಾರಾಯಣ, ವೆಂಕಟೇಶ ಕಾರಂತ, ಡಿ. ಶೇಷಗಿರಿ, ಎಂ. ಎನ್. ಶೇರೆಗಾರ್ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT