ಸಿದ್ದಾಪುರ: ಕುಂದಾಪುರ ತಾಲ್ಲೂಕಿನ ಅಂಪಾರು ನೆಲ್ಲಿಕಟ್ಟೆ ಬಳಿ ಭಾನುವಾರ ಖಾಸಗಿ ಬಸ್ ಹಾಗೂ ಸ್ಯಾಂಟ್ರೊ ಕಾರು ನಡುವೆ ಬೀಕರ ಅಪಘಾತ ಉಂಟಾಗಿ ಇಬ್ಬರು ಧಾರಣ ಸಾವನ್ನಪ್ಪಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡದ್ದಾರೆ.
ತಾಲ್ಲೂಕಿನ ಕೊರ್ಗಿ ಹಾಗೂ ಮಲ್ಯಾಡಿ ಗ್ರಾಮದ ಐವರು ಸ್ನೇಹಿತರು ಅಮಾಸೆಬೈಲು ತೊಂಬಟ್ಟು ಇರ್ಕಿಗದ್ದೆ ಅಬ್ಬಿ ಜಲಪಾತ ವೀಕ್ಷಣೆಗೆ ಭಾನುವಾರ ತೆರಳಿದ್ದರು. ಜಲಪಾತ ನೋಡಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.
ಕುಂದಾಪುರದಿಂದ ಸಿದ್ದಾಪುರಕ್ಕೆ ತೆರಳುವ ಖಾಸಗಿ ಬಸ್ ಹಾಗೂ ಕುಂದಾಪುರ ಕಡೆಗೆ ತೆರಳುವ ಕಾರಿನ ನಡುವೆ ಅಪಘಾತದಲ್ಲಿ ಮಲ್ಯಾಡಿ ದೀಕ್ಷಿತ್ ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಹೊಸಮಠ ಹಾಗೂ ಅರುಣ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿಯೇ ಕಿರಣ್ ಹೊಸಮಠ ಮೃತರಾಗಿದ್ದಾರೆ. ಅರುಣ್ಗೆ ಚಿಕಿತ್ಸೆ ನಡೆಯುತ್ತಿದೆ. ಮನೀಶ್ ಹಾಗೂ ಜೀವನಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.