ಉಡುಪಿ:ಯಕ್ಷಗಾನ ಕಲೆಗೆ ಸಲ್ಲಿಸಿರುವ ಅಳಿಲುಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸವಾಗಿದೆ. ಕೊರೊನಾದಿಂದ ಯಕ್ಷಗಾನ ಮೇಳಗಳು ನಡೆಯುತ್ತಿಲ್ಲ. ಯಕ್ಷಗಾನ ಕಲೆ ನಂಬಿಕೊಂಡು ಜೀವನ ಮಾಡುತ್ತಿರುವ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ, ಅಕಾಡೆಮಿ ಹಾಗೂ ದಾನಿಗಳು ನಿಲ್ಲಬೇಕು. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಯುವಜನತೆ ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಬೇಕು ಎಂದುಯಕ್ಷಗಾನ ಕವಿ, ಅರ್ಥಧಾರಿಅಂಬಾತನಯ ಮುದ್ರಾಡಿ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.