ADVERTISEMENT

ವೈದ್ಯಾಧಿಕಾರಿ ಕಿರುಕುಳ ಆರೋಪ: ಆರೋಗ್ಯ ಸಹಾಯಕ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 18:50 IST
Last Updated 12 ಅಕ್ಟೋಬರ್ 2018, 18:50 IST

ಉಡುಪಿ: ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಸಹಾಯಕ ಎಂ.ಇ.ನಾಗರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯಾಧಿಕಾರಿ ಡಾ.ಮಹೇಶ್‌ ಐತಾಳ್‌ ಅವರ ಕಿರುಕುಳವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದು ನಾಗರಾಜ್ ಅವರ ಸಂಬಂಧಿ ಹರೀಶ್‌ ಆರೋಪಿಸಿದ್ದಾರೆ.

ಪರಿಶೀಲನೆ–ಡಿಎಚ್‌ಒ: ನಾಗರಾಜ್ ಮುಂಗೋಪಿ ಸ್ವಭಾವದ ವ್ಯಕ್ತಿ. ಕರ್ತವ್ಯ ನಿರ್ಲಕ್ಷ್ಯ ಸಂಬಂಧ ಈಚೆಗೆ ಡಾ.ಮಹೇಶ್ ಐತಾಳ್‌ ಅವರು ನೋಟಿಸ್‌ ನೀಡಿದ್ದರು. ಇದರಿಂದ ಮನನೊಂದು ಈ ರೀತಿ ಮಾಡಿಕೊಂಡಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಡಿಎಚ್‌ಒ ಡಾ.ರೋಹಿಣಿ ತಿಳಿಸಿದರು. ಈ ಬಗ್ಗೆ ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.