ಹೆಬ್ರಿ: ರಿಕ್ಷಾ ಯೂನಿಯನ್ನ ಕುಟುಂಬ ಸಮ್ಮೇಳನದಂತಹ ಕಾರ್ಯಕ್ರಮವನ್ನು ಹೆಬ್ರಿಯ ಆಟೊ ರಿಕ್ಷಾ ಚಾಲಕ, ಮಾಲೀಕರ ಸಂಘದವರು ಒಗ್ಗಟ್ಟಿನಿಂದ ಮಾಡಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಹೆಬ್ರಿ ತಾಲ್ಲೂಕು ರಿಕ್ಷಾ ಚಾಲಕ, ಮಾಲೀಕರ ಸಂಘದ ಆಶ್ರಯದಲ್ಲಿ ಶ್ರೀ ಅನಂತ ಪದ್ಮನಾಭ ಆಟೊರಿಕ್ಷಾ ಚಾಲಕ, ಮಾಲೀಕರ ಸಂಘ ಹೆಬ್ರಿ, ಶ್ರೀ ಮಹಾಗಣಪತಿ ಆಟೋರಿಕ್ಷಾ ಚಾಲಕ, ಮಾಲೀಕರ ಸಂಘ ಮುದ್ರಾಡಿ, ಮುನಿಯಾಲ ಆಟೊರಿಕ್ಷಾ ಚಾಲಕ, ಮಾಲೀಕರ ಸಂಘ ಆಯೋಜಿಸಿದ್ದ ಕುಟುಂಬ ಸಮ್ಮೇಳನ ಉದ್ಘಾಟಿಸಿ ಅವರ ಮಾತನಾಡಿದರು.
ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ ಕುಚ್ಚೂರು ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅದ್ಯಕ್ಷೆ ಭಾರ್ಗವಿ ಆರ್. ಐತಾಳ್, ಹೆಬ್ರಿ ತಾಲ್ಲೂಕು ರಿಕ್ಷಾ ಚಾಲಕ, ಮಾಲೀಕರ ಸಂಘದ ಗೌರವಾಧ್ಯಕ್ಷ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್, ಕಾನೂನು ಸಲಹೆಗಾರ ಭರತ ಕುಮಾರ್ ಶೆಟ್ಟಿ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಎಸ್ ಬಂಗೇರ, ಪ್ರಮುಖರಾದ ಅಣ್ಣಪ್ಪ ಪೂಜಾರಿ, ಕೃಷ್ಣ ಶೆಟ್ಟಿಗಾರ್ ಮುನಿಯಾಲು, ಕೃಷ್ಣ ಶೆಟ್ಟಿಗಾರ್ ಮುದ್ರಾಡಿ, ಸನತ್ ಕುಮಾರ್ ಮುದ್ರಾಡಿ, ಸುಬ್ರಹ್ಮಣ್ಯ ದೇವಾಡಿಗ, ದಿನೇಶ ನಾಯ್ಕ್ ಮುನಿಯಾಲು, ರಮೇಶ ನಾಯ್ಕ, ನಿರಂಜನ ಹೆಗ್ಡೆ, ಪ್ರವೀಣ್ ಪೂಜಾರಿ ಉಪ್ಪಳ, ಶಿವರಾಮ ಶೆಟ್ಟಿಗಾರ್ ವರಂಗ, ನಾಗರಾಜ ಶೆಟ್ಟಿಗಾರ್, ಉದಯ ಪೂಜಾರಿ ಬೇಳಂಜೆ, ಉದಯ ಶೆಟ್ಟಿ, ಪ್ರವೀಣ ಶೆಟ್ಟಿ ಮದ್ರಾಡಿ, ಸುರೇಂದ್ರ ಪೂಜಾರಿ ಚಾರ ಇದ್ದರು. ಶ್ರೀನಾಥ ಶೆಟ್ಟಿಗಾರ್ ಸ್ವಾಗತಿಸಿದರು. ಗಗನ್ ಶೆಟ್ಟಿ ನಿರೂಪಿಸಿದರು. ಶಂಕರ ಪೂಜಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.