ಉಡುಪಿ: ಕೃಷ್ಣಮಠದಲ್ಲಿ 1 ತಿಂಗಳು ನಡೆಯುವ ಪಶ್ಚಿಮ ಜಾಗರ ಪೂಜೆ ಆರಂಭವಾಗಿದ್ದು, ಮಂಗಳವಾರದಿಂದ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಕೃಷ್ಣನಿಗೆ ಕೂರ್ಮಾರತಿ ಮಾಡಿದರು.
ಆಶ್ವಿಜ ಮಾಸದ ಶುಕ್ಲ ಏಕಾದಶಿಯಿಂದ ಆರಂಭಗೊಂಡು 1 ತಿಂಗಳು ಪಶ್ಚಿಮ ಜಾಗರ ಪೂಜೆ ನೆರವೇರಲಿದೆ. ಬೆಳಗಿನ ಜಾವ ಗರ್ಭಗುಡಿಯ ಸುತ್ತಲೂ ದೀಪಗಳನ್ನು ಹಚ್ಚಿ, ಸೂರ್ಯ ವಾದ್ಯ ಮೊಳಗಿಸಿ ಕೃಷ್ಣನಿಗೆ 14 ಬಗೆಯ ಪೂಜೆ ಸಹಿತ ಪಶ್ಚಿಮ ಜಾಗರ ಪೂಜೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.