ADVERTISEMENT

ಕೆಬಿಸಿ: ಉಡುಪಿಯ ಅನಮಯಗೆ ₹50 ಲಕ್ಷ ಬಹುಮಾನ

₹1 ಕೋಟಿ ಪ್ರಶ್ನೆಗೆ ಉತ್ತರಿಸದೆ ಹೊರಬಂದ ಬಾಲಕ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 21:25 IST
Last Updated 16 ಡಿಸೆಂಬರ್ 2020, 21:25 IST
ಅನಮಯ, ಉಡುಪಿಯ ಬಾಲಕ
ಅನಮಯ, ಉಡುಪಿಯ ಬಾಲಕ   

ಉಡುಪಿ: ಬಾಲಿವುಡ್‌ ನಟ ಅಮಿತಾಬ್ ಬಚ್ಚನ್‌ ನಿರೂಪಣೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕೌನ್‌ ಬನೇಗಾ ಕರೋಡ್‌ಪತಿ‘ ಕಾರ್ಯಕ್ರಮದಲ್ಲಿ ಉಡುಪಿಯ ಬಾಲಕ ಅನಮಯ ₹ 50 ಲಕ್ಷ ಬಹುಮಾನ ಗೆದ್ದಿದ್ದಾನೆ.

ಡಿ.14ರಿಂದ 17ರವರೆಗೆ ಪ್ರಸಾರವಾಗುವ ಕೆಬಿಸಿ ಸ್ಟುಡೆಂಟ್ಸ್ ವೀಕ್‌ ಸರಣಿಯಲ್ಲಿ ಭಾಗವಹಿಸಿದ್ದ ಅನಮಯ, ಅಮಿತಾಬ್ ಕೇಳಿದ 14 ಪ್ರಶ್ನೆಗಳಿಗೆ ಉತ್ತರ ನೀಡಿ ₹ 50 ಲಕ್ಷ ಗೆದ್ದುಕೊಂಡ. ₹ 1 ಕೋಟಿ ಬಹುಮಾನದ 15ನೇ ಪ್ರಶ್ನೆಗೆ ಉತ್ತರಿಸದೆ ಸ್ಪರ್ಧೆಯಿಂದ ಹೊರಬಂದ.

ಸ್ಪರ್ಧೆಯ ನಿಯಮಾವಳಿಯ ಪ್ರಕಾರ 6 ವರ್ಷದ ಬಳಿಕ ಅನಮಯಗೆ ₹ 50 ಲಕ್ಷ ಬಹುಮಾನದ ಮೊತ್ತ ಹಾಗೂ ಬಡ್ಡಿಯ ಹಣ ಒಟ್ಟಾಗಿ ಕೈಸೇರಲಿದೆ. ಜತೆಗೆ, ₹ 5 ಲಕ್ಷದ ಸ್ಕಾಲರ್ ಶಿಪ್‌ ಕೂಡ ಅನಮಯ ಪಾಲಾಯಿತು.

ADVERTISEMENT

ಅನಮಯ ಕಾರುಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದು, ಕಾರ್ಯಕ್ರಮದಲ್ಲಿ ಅಮಿತಾಬ್‌ ಕಾರಿನ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರಿಸುವ ಮೂಲಕ ಎಲ್ಲರನ್ನು ದಂಗು ಬಡಿಸಿದ. ಜಗತ್ತಿನ ದುಬಾರಿ ಕಾರುಗಳ ಹೆಸರು, ವಿಶೇಷತೆಯ ಕುರಿತು ವಿವರ ನೀಡಿದ ಅನಮಯ, ಮುಂದೆ ಕಾರು ತಯಾರಿಕಾ ಕಂಪನಿ ಆರಂಭಿಸುವ ಇರಾದೆಯನ್ನು ವ್ಯಕ್ತಪಡಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.