ADVERTISEMENT

ಕೋಟದಲ್ಲಿ ರಾತ್ರಿ ಇಬ್ಬರ ಭೀಕರ ಕೊಲೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 6:06 IST
Last Updated 27 ಜನವರಿ 2019, 6:06 IST
ಯತೀಶ್
ಯತೀಶ್   

ಉಡುಪಿ: ಕೋಟದಲ್ಲಿ ಶನಿವಾರ ರಾತ್ರಿ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಭರತ್ ಹಾಗೂ ಯತೀಶ್ ಕೊಲೆಯಾದವರು.

ಯತೀಶ್ ಕಳೆದಬಾರಿ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ತಾಲ್ಲೂಕಿನಿಂದ ಕಾಂಗ್ರೆಸ್ ಅಭ

ADVERTISEMENT
ಭರತ್

್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಕೇಶ್ ಮಲ್ಲಿ ಆಪ್ತ. ಭರತ್ ಆಟೊ ಚಾಲಕ.

ಶನಿವಾರ ರಾತ್ರಿ ಪರಿಚಿತರ ಸಮಾರಂಭ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ರಾಜಲಕ್ಷ್ಮಿ ಸಭಾಂಗಣದ ಎದುರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನೆಡೆಸಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಟಾಯ್ಲೆಟ್ ಗುಂಡಿ ತೆಗೆಯುವ ವಿಚಾರದಲ್ಲಿ ಕೊಲೆಯಾದ ಭರತ್ ಹಾಗೂ ಯತೀಶ್ ಸ್ನೇಹಿತನ ಪರವಾಗಿ ಕೆಲವರ ಜತೆ ವೈಷಮ್ಯ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಜಾಗದ ವಿಚಾರದಲ್ಲಿನ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.