
ಬೈಂದೂರು: ವತ್ತಿನೆಣೆಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ (ಕಿರು ಮಂತ್ರಾಲಯ) ಮಂಗಳವಾರ ಗುರು ರಾಘವೇಂದ್ರ ಸ್ವಾಮಿ ಜಯಂತಿ ಪ್ರಯುಕ್ತ, ಗುರು ರಾಘವೇಂದ್ರರ ವಿಶುದ್ದ ಸಾನಿಧ್ಯ ಸಮೃದ್ಧಿಗೋಸ್ಕರ ಲಕ್ಷ ತುಳಸಿ ಅರ್ಚನೆ ಮಂಗಳವಾರ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕರಾದ ಸುಬ್ರಾಯ ನಾವುಡ, ಮುರಳೀಧರ ನಾವುಡ, ತಿರುಮಲೇಶ್ವರ ಭಟ್ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ರಾಯರ ದರ್ಶನ ಪಡೆದರು.
ಗುರು ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ, ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಸದಸ್ಯರಾದ ರವೀಂದ್ರ ಶ್ಯಾನುಭಾಗ್, ದಿನೇಶ್ ಕೆ, ಅಣ್ಣಪ್ಪ ಪೂಜಾರಿ, ರಾಜು ಶೆಟ್ಟಿ ಸೂರ್ಕುಂದ, ರಾಜು ದೇವಾಡಿಗ, ದಿನಕರ ಶೆಟ್ಟಿ, ನಾಗಯ್ಯ ಶೆಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.