ಬ್ರಹ್ಮಾವರ: ಕರ್ಜೆ ಗ್ರಾಮದ ಹೊಸೂರು ತಡಾಲಿನ ಶಕೀಲಾ(38) ಮತ್ತು ಪುತ್ರಿ ಇಂಚರ(12) ಜೂನ್ 3ರಿಂದ ನಾಪತ್ತೆಯಾಗಿದ್ದಾರೆ.
‘ಶಕೀಲಾ ಅವರು ಹಿಲಿಯಾಣದ ವಿಜಯಕುಮಾರ್ ಎಂಬುವರೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದು, ಒಂದು ವರ್ಷದ ಹಿಂದೆ ಸಂಸಾರದಲ್ಲಿ ಮನಸ್ತಾಪದಿಂದಾಗಿ ಗಂಡನನ್ನು ಬಿಟ್ಟು ಹೊಸೂರಿನ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು. ಜೂನ್ 3ರಂದು ಮಗಳೊಂದಿಗೆ ಹಿಲಿಯಾಣದ ಗಂಡನ ಮನೆಗೆ ಹೋಗುವುದಾಗಿ ತೆರಳಿದ್ದರು. ಅದೇ ದಿನ ಸಂಜೆ, ಬೆಂಗಳೂರಿಗೆ ಬಂದಿದ್ದೇವೆ, ನಮ್ಮನ್ನು ಹುಡುಕುವುದು ಬೇಡ ಎಂದು ತಿಳಿಸಿ ಫೋನ್ ಸ್ವೀಚ್ ಆಫ್ ಮಾಡಿದ್ದಾರೆ. ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ’ ಎಂದು ತಂದೆ ಭುಜಂಗ ಶೆಟ್ಟಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.