ಉಡುಪಿ: ಲಾಟರಿಯಲ್ಲಿ ಲಕ್ಷಾಂತರ ರೂಪಾಯಿ ಬಹುಮಾನ ಗೆದ್ದಿರುವುದಾಗಿ ನಂಬಿಸಿದ ವಂಚಕನೊಬ್ಬ ಕಾರ್ಕಳದ ಬೆಳ್ಮಣ್ಣುವಿನ ಸುಜಿತ್ ಪ್ರಭು ಎಂಬುವರಿಗೆ ₹ 2ಲಕ್ಷಕ್ಕೂ ಹೆಚ್ಚು ನಗದು ವಂಚನೆ ಮಾಡಿದ್ದಾನೆ.
ಸೆ.4ರಂದು ಸುಜಿತ್ ಅವರಿಗೆ ಕರೆಮಾಡಿದ ವಂಚಕ ₹ 12,18,095 ಲಾಟರಿ ಬಂದಿರುವುದಾಗಿ ನಂಬಿಸಿ, ಡಾಲರ್ ಅನ್ನು ರೂಪಾಯಿಗೆ ಬದಲಿಸಲು ₹ 6,500 ಖಾತೆಗೆ ಹಾಕುವಂತೆ ನಂಬಿಸಿದ್ದಾನೆ. ಅದರಂತೆ ಹಣ ಹಾಕಿಸಿಕೊಂಡ ಬಳಿಕ ಮತ್ತೊಬ್ಬ ವಂಚಕ ಕರೆ ಮಾಡಿ, ಬೇರೆ ಬೇರೆ ಖಾತೆಗಳಿಗೆ ₹ 2,05,500 ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ವಂಚನೆ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.