ADVERTISEMENT

ಪೇಟಬೆಟ್ಟು: ಬಬ್ಬುಸ್ವಾಮಿ ಪರಿವಾರ ದೈವಗಳ ನೇಮೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:27 IST
Last Updated 11 ಜನವರಿ 2023, 7:27 IST
ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು
ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು   

ಶಿರ್ವ: ಕಟಪಾಡಿ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನ ಮತ್ತು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಭಗವಾನ್ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಕ್ಷೇತ್ರ ಶುದ್ಧಿ ಪೂಜೆ, ಭಂಡಾರ ಹೊರಟು ರಾತ್ರಿ ಭಗವಾನ್ ಬಬ್ಬುಸ್ವಾಮಿಯ ನೇಮೋತ್ಸವ ಮತ್ತು ಆದಿಶಕ್ತಿ ತನ್ನಿಮಾನಿಗ ದೇವಿಯ ನೇಮೋತ್ಸವವು ಜರುಗಿತು. ಶಾಸಕ ಲಾಲಾಜಿ ಆರ್. ಮೆಂಡನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಪಾಂಗಾಳ ನಾಯಕ್ ಮನೆತನದವರು, ಕಟಪಾಡಿ ಹೊಸಮನೆ ಭರತ್ ಹೆಗ್ಡೆ, ಗರಡಿಮನೆ ಅಶೋಕ್ ಎನ್. ಪೂಜಾರಿ, ಕೆ. ಪ್ರೇಮ್ ಕುಮಾರ್, ದೈವಸ್ಥಾನದ ಗುರಿಕಾರ ಹರಿಶ್ಚಂದ್ರ ಪಿಲಾರ್, ಪ್ರಮುಖರಾದ ತುಕಾರಾಮ ಎಸ್. ಉರ್ವ, ಪ್ರಧಾನ ಅರ್ಚಕ ಜಯಕರ್ ವಿ. ಯಶವಂತ್ ಕೆ. ರಾಜ್‍ಗೋಪಾಲ್, ಸದಾನಂದ, ಉಮೇಶ್, ಸುನಿಲ್, ಪ್ರಶಾಂತ್ ಪಾತ್ರಿ ಇಂದ್ರಾಳಿ, ಭಾಸ್ಕರ ಮಧ್ಯಸ್ಥ, ರಾಜಕಲ ಮುಖ್ಯಸ್ಥ ರವಿ ಶೆಟ್ಟಿ ಮಣಿಪಾಲ, ತಂಗಡಿ ಮಹಿಳಾ ಬಳಗ, ಸಂಗಮ ಫ್ರೆಂಡ್ಸ್ ಕಟಪಾಡಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್‍ಪಾಲ್ ಎ. ಸುವರ್ಣ, ಬಿಜೆಪಿ ನಾಯಕಿ ಗೀತಾಂಜಲಿ ಎಂ. ಸುವರ್ಣ, ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಕಟಪಾಡಿ ಗ್ರಾಮ ಪಂಚಾಯಿತಿಯ ಇಂದಿರಾ ಎಸ್.ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT