ADVERTISEMENT

ಕರಾವಳಿ ವೈದ್ಯನಿಗೆ ಪ್ರಧಾನಿ ಮೋದಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 7:56 IST
Last Updated 7 ಮಾರ್ಚ್ 2021, 7:56 IST
ಬ್ರಹ್ಮಾವರದಲ್ಲಿ ನಡೆದ ಜನೌ‍ಷಧಿ ದಿನಾಚರಣೆ
ಬ್ರಹ್ಮಾವರದಲ್ಲಿ ನಡೆದ ಜನೌ‍ಷಧಿ ದಿನಾಚರಣೆ   

ಉಡುಪಿ: ಬ್ರಹ್ಮಾವರ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಮೈದಾನದಲ್ಲಿ ಭಾನುವಾರನಡೆದ ಜನೌಷಧ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಅವರೊಂದಿಗೆನಡೆದವಿಡಿಯೋಸಂವಾದದಲ್ಲಿದಕ್ಷಿಣ ಕನ್ನಡ ಜಿಲ್ಲೆಯ ವೈದ್ಯ ಡಾ.ಪದ್ಮನಾಭ ಕಾಮತ್ ಭಾಗವಹಿಸಿದ್ದರು.

ಸಂವಾದದಲ್ಲಿ ಮಾತನಾಡಿದ ಡಾ.ಪದ್ಮನಾಭ ಕಾಮತ್‌ ‘ಮೂರು ವರ್ಷಗಳಿಂದ ಜನೌಷಧ ಅಭಿಯಾನದ ಭಾಗವಾಗಿರುವುದಕ್ಕೆ ಸಂತಸವಿದೆ.ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿತುರ್ತುಚಿಕಿತ್ಸೆಸಿಗದೆಹೃದಯಾಘಾತದಿಂದ ಮೃತಪಡುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಮೂಲದಲ್ಲಿಯೇಪರಿಹಾರನೀಡಲುಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರ ಅಳವಡಿಸಲಾಯಿತು. ಆರಂಭದಲ್ಲಿ ಕೆಲವರು ಹುಚ್ಚು ಎಂದು ಮೂದಲಿಸಿದರು. ದೃತಿಗೆಡದೆ ಮತ್ತೆ 6 ಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರಗಳನ್ನು ಹಾಕಿದೆ. ಅದರ ಫಲವಾಗಿಇದುವರೆಗೂ 100ಕ್ಕೂ ಹೆಚ್ಚು ಜನರಲ್ಲಿ ಹೃದ್ರೋಗ ಸಮಸ್ಯೆ ಪತ್ತೆ ಹಚ್ಚಿಅವರ ಜೀವ ಉಳಿಸಲು ನೆರವಾಯಿತು’ ಎಂದು ಪ್ರಧಾನಿ ಮೋದಿ ಅವರಿಗೆ ವೈದ್ಯ ಡಾ.ಪದ್ಮನಾಭ ಕಾಮತ್ ವಿವರಿಸಿದರು.

‘ಜನೌಷಧಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ಹಲವು ಪ್ರಶ್ನೆಗಳು,ಟೀಕೆಗಳು ಎದುರಾದವು. ಇದಕ್ಕೆಲ್ಲ ಜನೌಷಧಜನಪಯೋಗಿ ಎಂಬುದು ನನ್ನ ಉತ್ತರವಾಗಿತ್ತು’ ಎಂದು ಡಾ.ಪದ್ಮನಾಭ ಕಾಮತ್ ಪ್ರಧಾನಿಗೆ ವಹೇಳಿದರು.

ADVERTISEMENT

ಜನೌಷಧ ಕೇಂದ್ರಗಳಲ್ಲಿ ಇಸಿಜಿ ಸೇವೆ ಆರಂಭಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ ‘ನಮ್ಮ ಕಲ್ಪನೆಗೆ ನೀವು ಮೂರ್ತರೂಪ ಕೊಟ್ಟಿದ್ದೀರಿ’ ಎಂದು ಅಭಿನಂದಿಸಿದರು.

ಸಂವಾದದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಾ.ಪದ್ಮನಾಭ್ ಕಾಮತ್‌ ‘ಆರಂಭದಲ್ಲಿ ಜನೌಷಧದ ಬಗ್ಗೆ ಜನರಲ್ಲಿ ಕೀಳರಿಮೆ ಇತ್ತು. ಜನೌಷಧ ಬಳಕೆಗೆ ಚೀಟಿ ಬರೆದಾಗ ವೈದ್ಯರಿಗೆ ಬಗ್ಗೆ ಹುಚ್ಚು ಹಿಡಿದಿದೆ ಎಂದು ನಿಂದಿಸಿದರು. ಈಗ ನಿಧಾನವಾಗಿ ಜನೌಷಧದ ಮಹತ್ವದ ಬಗ್ಗೆ ಸಮಾಜಕ್ಕೆ ಅರಿವಾಗುತ್ತಿದೆ. ಹಣವಿದ್ದವರೂ ಜನೌಷಧದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದರು.

2018ರಲ್ಲಿ ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ ಎಂಬ ಆರೋಗ್ಯ ಸೇವೆಯನ್ನು ಗ್ರಾಮೀಣ ಭಾಗಗಳಲ್ಲಿ ಚಾಲನೆ ನೀಡಲಾಯಿತು. ಬಳಿಕ ಅದರ ಅಂಗಸಂಸ್ಥೆಯಾಗಿ ಪಿಎಂಬಿಜೆಕೆ ಕಾಯಕಲ್ಪ ಕಾರ್ಯಕ್ರಮ ಆರಂಭಿಸಲಾಯಿತು. ಈಗ 6 ಜಿಲ್ಲೆಗಳ ಜನೌಷಧ ಕೇಂದ್ರಗಳಲ್ಲಿ ಇಸಿಜಿ ಸೌಲಭ್ಯ ದೊರೆಯುತ್ತಿದೆ ಎಂದು ಡಾ.ಪದ್ಮನಾಭ ಕಾಮತ್ ಹೇಳಿದರು.

ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದದ ಬಳಿಯ ಜನೌಷಧ ಕೇಂದ್ರದ ಮಾಲೀಕರಾದ ಸುಂದರ ಪೂಜಾರಿ ಹಾಗೂ ಜನೌಷಧ ಫಲಾನುಭವಿ ಅಂಗವಿಕಲರಾದ ಸುಧೀರ್ ಪೂಜಾರಿ ಸಹ ಪ್ರಧಾನಿ ಜತೆ ಸಂವಾದಕ್ಕೆ ಆಯ್ಕೆಯಾಗಿದ್ದರು.ಇಬ್ಬರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ.

ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಪತಿ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.