ADVERTISEMENT

ಸಮಸ್ಯೆ ಇದ್ದರೆ ಇಲಾಖೆ ಗಮನಕ್ಕೆ ತನ್ನಿ

ಕುಂದುಕೊರತೆ ಸಭೆಯಲ್ಲಿ ಎಸ್‌ಐ ಭೀಮಾಶಂಕರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 5:07 IST
Last Updated 2 ಮಾರ್ಚ್ 2021, 5:07 IST
ಗುಜ್ಜಾಡಿ ನಾಯಕವಾಡಿಯಲ್ಲಿ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್. ಮಾತನಾಡಿದರು.
ಗುಜ್ಜಾಡಿ ನಾಯಕವಾಡಿಯಲ್ಲಿ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್. ಮಾತನಾಡಿದರು.   

ಬೈಂದೂರು: ಅನುಸೂಚಿತ ಜಾತಿ ಮತ್ತು ಪಂಗಡದ ಜನರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ನೇರವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಪ್ರಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಇಲಾಖೆ ಮಾಡುತ್ತದೆ ಎಂದು ಗಂಗೊಳ್ಳಿ ಎಸ್‌ಐ ಭೀಮಾಶಂಕರ ಎಸ್. ಹೇಳಿದರು.

ಗುಜ್ಜಾಡಿ ನಾಯಕವಾಡಿಯಲ್ಲಿ ಭಾನುವಾರ ಸಂಜೆ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಸಮುದಾಯಗಳ ಪರವಾಗಿ ಅಹವಾಲುಗಳನ್ನು ಮಂಡಿಸಿದ ಭಾಸ್ಕರ ಎಚ್. ಜಿ, ಅಶೋಕ ಎನ್. ಡಿ, ರಾಘವೇಂದ್ರ ಮೇಲ್‌ಗಂಗೊಳ್ಳಿ, ಮಂಜುನಾಥ, ನಿತೇಶ್, ಇತರರು, ‘ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಮೀನುಗಾರರಿಗೆ ‘ಅ‍’ ವರ್ಗದ ಸದಸ್ಯತ್ವ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಸಬೇಕು. ಪಂಚಾಯಿತಿಗಳ ಶೇ 25 ಮೀಸಲು ನಿಧಿಯ ಸಮರ್ಪಕ ಬಳಕೆ ಆಗಬೇಕು. ಗಂಗೊಳ್ಳಿ ಲೈಟ್‌ಹೌಸ್ ಬಳಿ ಸಾರ್ವಜನಿಕ ರುದ್ರಭೂಮಿ ಜಾಗದಲ್ಲಿ ಆಗಿರುವ ಅತಿ
ಕ್ರಮಣ ತೆರವುಗೊಳಿಸಬೇಕು. ಗುಜ್ಜಾಡಿ
ಗ್ರಾಮದ ಲೈಟ್‌ಹೌಸ್ ಸಮೀಪ ಸರ್ಕಾರಿ ಭೂಮಿ ಕಬಳಿಸಲಾಗಿದ್ದು ಅದರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಶ್ರೀಧರ ನಾಯಕವಾಡಿ ಸ್ವಾಗತಿಸಿದರು. ನಿತೇಶ್ ವಂದಿಸಿದರು. ಚೆನ್ನಬಸವೇಶ್ವರ ಯುವಕ ಮಂಡಲದ ಅಧ್ಯಕ್ಷ ಕೃಷ್ಣ ಕೆ, ಮಂಜುನಾಥ, ಎಚ್‌.ಸಿ ಗಿರೀಶ್, ಪರಿಶಿಷ್ಟ ಸಂಘಟನೆಗಳ ಮುಖಂಡರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.