ADVERTISEMENT

ಉಡುಪಿ: ಪಾಂಗಳ ರಬೀಂದ್ರ ನಾಯಕ್ ನಿಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 14:18 IST
Last Updated 2 ಅಕ್ಟೋಬರ್ 2021, 14:18 IST
ರಬೀಂದ್ರ ನಾಯಕ್‌
ರಬೀಂದ್ರ ನಾಯಕ್‌   

ಉಡುಪಿ: ಸಾರಿಗೆ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪಾಂಗಳ ರಬೀಂದ್ರ ನಾಯಕ್‌ (99) ಶನಿವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ.

1922ರಲ್ಲಿ ಫೆ.9ರಂದು ಉಡುಪಿಯಲ್ಲಿ ಜನಿಸಿದ ಪಿ.ಆರ್.ನಾಯಕ್‌ ಮುಂಬೈ ವಿವಿಯಿಂದ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಲ್ಲಿ ಟೆಕ್ನಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದರು.

1951ರಲ್ಲಿ ಸಾರಿಗೆ ಉದ್ಯಮ ಪ್ರವೇಶಿಸಿದ ಪಿ.ಆರ್.ನಾಯಕ್‌ ಹನುಮಾನ್ ಟ್ರಾನ್ಸ್‌ಪೋರ್ಟ್‌ ಹಾಗೂ ಗಜಾನನ ಮೋಟಾರ್ಸ್‌ ಕಂಪನಿಯನ್ನು ಮುನ್ನಡೆಸಿದ್ದರು. ಕರಾವಳಿಯ ಸಾರಿಗೆ ಕ್ಷೇತ್ರವನ್ನು ಬಲಪಡಿಸುವಲ್ಲಿ ನಾಯಕ್ ಅವರ ಪರಿಶ್ರಮ ದೊಡ್ಡದು.

ADVERTISEMENT

ರಬೀಂದ್ರ ನಾಯಕ್ ಅವರ ನಿಧನಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಶಾಸಕ ರಘುಪತಿ ಭಟ್‌ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.