ಹಿರಿಯಡಕ (ಉಡುಪಿ): ಶೀರೂರು ಮಠದ ನೂತನ ಯತಿಯ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮವು ಇಲ್ಲಿಗೆ ಸಮೀಪದ ಶೀರೂರು ಮೂಲ ಮಠದಲ್ಲಿ ಮೇ 11ರಿಂದ 14ರವರೆಗೆ ನಡೆಯಲಿದೆ.
ಶಿರಸಿ ತಾಲ್ಲೂಕಿನ ಸೋಂದಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಸಂಕಲ್ಪ ಮಾಡಿದ್ದರು. ಲಾಕ್ಡೌನ್ ಮಾರ್ಗಸೂಚಿಯಪಾಲನೆಗೆ, ಈ ಕಾರ್ಯಕ್ರಮವನ್ನು ಶೀರೂರು ಮೂಲ ಮಠಕ್ಕೆ ಸ್ಥಳಾಂತರಿಸಲಾಗಿದೆ.
ಸನ್ಯಾಸಾಶ್ರಮ ಸ್ವೀಕರಿಸಲಿರುವ ವಟುವು ಈಗಾಗಲೇ ಪೋಷಕರ ಜೊತೆಗೆ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ದೇವರ ದರ್ಶನ ಪೂರ್ಣಗೊಳಿಸಿದ್ದಾರೆ. ಉಡುಪಿಯ ಅಷ್ಟಮಠದ ಯತಿಗಳ ಆಶೀರ್ವಾದದೊಂದಿಗೆ ಫಲ ಮಂತ್ರಾಕ್ಷತೆ ಸ್ವೀಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.