ADVERTISEMENT

ನಿವೃತ್ತಿ ದಿನ ಬಡ ವಿದ್ಯಾರ್ಥಿನಿಗೆ ಮನೆ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 12:19 IST
Last Updated 31 ಅಕ್ಟೋಬರ್ 2020, 12:19 IST
ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಯ ಮುರಳಿ ಕಡೇಕಾರ್ ಅವರು ನಿವೃತ್ತಿಯ ದಿನ ಬಡ ವಿದ್ಯಾರ್ಥಿನಿಗೆ ಮನೆ  ಉಡುಗೊರೆ ನೀಡಿದ್ದು, ಪಲಿಮಾರು ಮಠದ ವಿದ್ಯಾಧೀಶ ತೀರ್ಥರ ಸಮ್ಮುಖದಲ್ಲಿ ಮನೆ ಹಸ್ತಾಂತರ ಮಾಡಲಾಯಿತು.
ಉಡುಪಿಯ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಯ ಮುರಳಿ ಕಡೇಕಾರ್ ಅವರು ನಿವೃತ್ತಿಯ ದಿನ ಬಡ ವಿದ್ಯಾರ್ಥಿನಿಗೆ ಮನೆ  ಉಡುಗೊರೆ ನೀಡಿದ್ದು, ಪಲಿಮಾರು ಮಠದ ವಿದ್ಯಾಧೀಶ ತೀರ್ಥರ ಸಮ್ಮುಖದಲ್ಲಿ ಮನೆ ಹಸ್ತಾಂತರ ಮಾಡಲಾಯಿತು.   

ಉಡುಪಿ: ತಾಲ್ಲೂಕಿನ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೇಕಾರ್ ಅವರು ನಿವೃತ್ತಿಯ ದಿನವೇ ಬಡ ವಿದ್ಯಾರ್ಥಿನಿಗೆ ಮನೆಯನ್ನು ಕಟ್ಟಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ತಾಲ್ಲೂಕಿನ ಕಕ್ಕುಂಜೆಯಲ್ಲಿ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ಸಮ್ಮುಖದಲ್ಲಿ ವಿದ್ಯಾರ್ಥಿನಿ ನಯನಾಗೆಮನೆ ಹಸ್ತಾಂತರಿಸಲಾಯಿತು. ಮುರಳಿ ಕಡೇಕಾರ್ 32 ವರ್ಷಗಳಿಂದ ನಿಟ್ಟೂರು ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದು, 5 ವರ್ಷಗಳ ಹಿಂದೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ್ದರು.

ಅದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಕೊರಗ ಸಮುದಾಯದ ನಯನಾ ಕುಟುಂಬ ತೀರಾ ಬಡತನದಲ್ಲಿರುವುದನ್ನು ಕಂಡು ಸ್ವಂತ ದುಡಿಮೆಯ ಹಣದಲ್ಲಿ ₹ 3.5 ಲಕ್ಷ ವ್ಯಯಿಸಿ ಚಿಕ್ಕದೊಂದು ಸೂರು ಕಟ್ಟಿಸಿಕೊಟ್ಟಿದ್ದಾರೆ.

ADVERTISEMENT

‘ನಿವೃತ್ತಿಯ ದಿನ ವಿಶೇಷವಾಗಿರಬೇಕು ಎಂಬ ಉದ್ದೇಶದಿಂದ ಜೋಪಡಿಯಲ್ಲಿದ್ದ ನಯನಾಗೆ ಮನೆ ಕಟ್ಟಿಸಿಕೊಟ್ಟಿದ್ದೇನೆ. ಹಿಂದಿನಿಂದಲೂ ದುಡಿಮೆಯ ಒಂದು ಭಾಗವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತಾ ಬಂದಿದ್ದೇನೆ. ಮುಂದೆಯೂ ಸಮಾಜಪರ ಕಾರ್ಯಗಳು ಮುಂದುವರಿಯಲಿವೆ’ ಎಂದು ಮುರಳಿ ಕಡೇಕಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.