ADVERTISEMENT

ಹೆಬ್ರಿ: ಚಿನ್ನದ ಅಂಗಡಿಗಳಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:04 IST
Last Updated 15 ಸೆಪ್ಟೆಂಬರ್ 2022, 4:04 IST
ಹೆಬ್ರಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್‌ನ ಕೆಳಗಡೆ ಇರುವ ಶ್ರೀ ಗಣೇಶ್ ಜುವೆಲ್ಲರಿಯಲ್ಲಿ ಚಿನ್ನಾಭರಣ ಕಳವು ಮಾಡಲಾಗಿದೆ.
ಹೆಬ್ರಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್‌ನ ಕೆಳಗಡೆ ಇರುವ ಶ್ರೀ ಗಣೇಶ್ ಜುವೆಲ್ಲರಿಯಲ್ಲಿ ಚಿನ್ನಾಭರಣ ಕಳವು ಮಾಡಲಾಗಿದೆ.   

ಹೆಬ್ರಿ: ಇಲ್ಲಿನ ಮುಖ್ಯಪೇಟೆಯಲ್ಲಿರುವ 2 ಚಿನ್ನದ ಅಂಗಡಿಗಳ ಬೀಗ ಒಡೆದು ಚಿನ್ನಾಭರಣ ದೋಚಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಹೆಬ್ರಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕ್‌ನ ಕೆಳಗಡೆ ಇರುವ ಶ್ರೀ ಗಣೇಶ್ ಜುವೆಲ್ಲರಿ ಹಾಗೂ ಕುಚ್ಚೂರು ರಸ್ತೆಯಲ್ಲಿರುವ ಶ್ರೀ ರಾಜರಾಜೇಶ್ವರಿ ಜ್ಯುವೆಲ್ಲರಿ ಮಳಿಗೆಯಲ್ಲಿ ಕಳ್ಳತನ ನಡೆದಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ವಿಜಯ್ ಪ್ರಸಾದ್, ಸಿಪಿಐ ಸಂಪತ್ ಕುಮಾರ್, ಹೆಬ್ರಿಯ ಪ್ರಭಾರ ಪಿಎಸ್ಐ ಶುಭಕರ್ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಕಳ್ಳತನ ನಡೆದ 2 ಚಿನ್ನದ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ಕಳ್ಳರ ಪತ್ತೆ ಸವಾಲಾಗಿದೆ. ಗಣೇಶ್ ಜ್ಯುವೆಲ್ಲರಿಯಿಂದ ₹ 3.5 ಲಕ್ಷ ಮೌಲ್ಯದ ಆಭರಣ, ಶ್ರೀ ರಾಜರಾಜೇಶ್ವರಿ ಜ್ಯುವೆಲ್ಲರಿಯಲ್ಲಿ ₹ 3,750 ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ.

ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.