ADVERTISEMENT

ತಗ್ಗರ್ಸೆ: ದೇವಸ್ಥಾನದಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:32 IST
Last Updated 30 ಜುಲೈ 2022, 5:32 IST
ಕಳತನ ನಡೆದಿರುವ ಚಂದಣದ ದುರ್ಗಾಪರಮೇಶ್ವರಿ ದೇವಸ್ಥಾನ.
ಕಳತನ ನಡೆದಿರುವ ಚಂದಣದ ದುರ್ಗಾಪರಮೇಶ್ವರಿ ದೇವಸ್ಥಾನ.   

ಬೈಂದೂರು: ಇಲ್ಲಿಗೆ ಸಮೀಪದ ತಗ್ಗರ್ಸೆ ಗ್ರಾಮದ ಚಂದಣದ ಸೋಮಲಿಂಗೇಶ್ವರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವರಿಗೆ ತೊಡಸಿರುವ ಮಂಗಳಸೂತ್ರ ಸೇರಿದಂತೆ ಚಿನ್ನದ ಆಭರಣವನ್ನು ದೋಚಿದ್ದಾರೆ. ದೇವಳದ ಬಾಗಿಲಿಗೆ ಹಾಕಿದ್ದ ಬೀಗವನ್ನು ಕಬ್ಬಿಣದ ರಾಡ್‌ನಿಂದ ಮುರಿದು ಒಳ ನುಗ್ಗಿ ಕೃತ್ಯ ಎಸಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಬೈಂದೂರು ಠಾಣೆಯ ಪಿಎಸ್‌ಐ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.