ADVERTISEMENT

ತಾರಿಣಿ ಶುಭದಾಯಿನಿ, ಡಿ.ಎ.ಶಂಕರ್‌ಗೆ ಈ ಸಾಲಿನ ‘ಇನಾಂದಾರ್‌‘ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಮೇ 2023, 4:30 IST
Last Updated 10 ಮೇ 2023, 4:30 IST
ತಾರಿಣಿ ಶುಭದಾಯಿನಿ
ತಾರಿಣಿ ಶುಭದಾಯಿನಿ   

ಉಡುಪಿ: ವಿಮರ್ಶಕ ಪ್ರೊ.ವಿ.ಎಂ.ಇನಾಂದಾರ್ ಸ್ಮರಣಾರ್ಥ ಕೊಡಮಾಡುವ 2021ರ ಸಾಲಿನ ‘ಇನಾಂದಾರ್ ಪ್ರಶಸ್ತಿ’ಗೆ ಲೇಖಕಿ, ವಿಮರ್ಶಕಿ ಆರ್.ತಾರಿಣಿ ಶುಭದಾಯಿನಿ ಮತ್ತು ಸಾಹಿತಿ ಡಿ.ಎ.ಶಂಕರ್ ಅವರ ಕೃತಿಗಳು ಆಯ್ಕೆಯಾಗಿವೆ.

ಪ್ರಶಸ್ತಿಗೆ ಆರ್.ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚು ಪಟ್ಟಿ’ ವಿಮರ್ಶಾಕೃತಿ ಹಾಗೂ ಸಾಹಿತಿ ಡಿ.ಎ.ಶಂಕರ್ ಅವರ ‘ವಾಗರ್ಥ’ ವಿಮರ್ಶಾ ಕೃತಿ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಎಂಜಿಎಂ ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ₹ 5ಸಾವಿರ ನಗದು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT
ಡಿ.ಎ.ಶಂಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.