ADVERTISEMENT

ರಾಮನಿಗೆ ಲಕ್ಷ ತುಳಸಿ ಅರ್ಚನೆ: ಪೇಜಾವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 13:41 IST
Last Updated 28 ಜುಲೈ 2020, 13:41 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಉಡುಪಿ: ಆ.5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದ್ದು, ಅಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ನೀಲಾವರ ಮಠದ ಗೋಶಾಲೆಯಲ್ಲಿ ರಾಮವಿಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡಲು ಸಂಕಲ್ಪ ಮಾಡಿದ್ದಾರೆ.

ಲಕ್ಷ ತುಳಸಿ ಅರ್ಚನೆಗೆ ಭಕ್ತರು ತುಳಸಿಯನ್ನು ಸಮರ್ಪಿಸಬಹುದು. ಆ.4ರ ಮಧ್ಯಾಹ್ನ 1ರೊಳಗೆ ಉಡುಪಿಯ ಪೇಜಾವರ ಮಠದ ಅಥವಾ ನೀಲಾವರ ಗೋಶಾಲೆಗೆ ಒಪ್ಪಿಸಬೇಕು ಎಂದು ಶ್ರೀಗಳು ವಿನಂತಿಸಿದ್ದಾರೆ.

ರಾಮಮಂದಿರ ಭೂಮಿ ಪೂಜೆ ನಿರ್ವಿಘ್ನವಾಗಿ ನೆರವೇರಬೇಕು. ಶೀಘ್ರ ರಾಮಮಂದಿರನಿರ್ಮಾಣವಾಗಬೇಕು ಎಂದು ಅಂದು ದೇವರಲ್ಲಿ ಪ್ರಾರ್ಥಿಸಲಾಗುವುದು ಎಂದು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ‌ ವಿಶ್ವಸ್ಥರೂ ಆಗಿರುವ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ADVERTISEMENT

ಮಾಹಿತಿಗೆ: 9449082198 , 9448451023 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.