ಹೆಬ್ರಿ: ಮಲ್ಲಿಗೆ ಕೃಷಿಯನ್ನು ಸರಿಯಾದ ಪಾಲನೆಯಿಂದ ಮಾಡಿದಾಗ ದೈನಂದಿನ ಆದಾಯ ಗಳಿಸಬಹುದು ಎಂದು ಚಾರದ ಮಲ್ಲಿಗೆ ಕೃಷಿಕ ಸತೀಶ್ ನಾಯ್ಕ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಘಟಕದ ಮುದ್ರಾಡಿ ವಲಯದ ಎಳ್ಳಾರೆ ದೇವಸ್ಥಾನದ ಬಳಿ ನಡೆದ ಮಲ್ಲಿಗೆ ಕೃಷಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಲ್ಲಿಗೆ ಕೃಷಿಯ ಮಾಹಿತಿ ನೀಡಿದ ಅವರು, ದಿನನಿತ್ಯದ ಆದಾಯಕ್ಕೆ ಮಲ್ಲಿಗೆ ಪೂರಕ. ರೈತರು ಮಲ್ಲಿಗೆ ಕೃಷಿ ಅಳವಡಿಸಿಕೊಂಡಾಗ ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಕಾರ್ಕಳ ಹೂವಿನ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ, ಕೃಷಿಕ ಫ್ರಾನ್ಸಿಸ್ ಡಿಸೋಜ ಮಲ್ಲಿಗೆ ಗಿಡಗಳ ಆಯ್ಕೆ, ನಾಟಿ, ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ದೇವೇಂದ್ರ ಕಾಮತ್ ಉದ್ಘಾಟಿಸಿದರು. ಮಲ್ಲಿಗೆ ಕೃಷಿಕ ವಿಠಲ, ಯೋಜನೆ ಮೇಲ್ವಿಚಾರಕಿ ಸುಮಲತಾ, ಕೃಷಿ ಅಧಿಕಾರಿ ಉಮೇಶ್ ಬಿ.ಕೆ, ಸೇವಾ ಪ್ರತಿನಿಧಿ ಹೇಮಾ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.