ADVERTISEMENT

ಅಪಘಾತ ಪ್ರಕರಣ: ಅಪರಾಧಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 5:09 IST
Last Updated 16 ಸೆಪ್ಟೆಂಬರ್ 2022, 5:09 IST

ಯಲ್ಲಾಪುರ: ಅತಿ ವೇಗ ಹಾಗೂ ನಿರ್ಲಕ್ಷ್ಯವಾಗಿ ಲಾರಿಯನ್ನು ಚಲಾಯಿಸಿ ಬಸ್ಸಿನ ಪ್ರಯಾಣಿಕರೊಬ್ಬರ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಯಲ್ಲಾಪುರದ ಸಿವಿಲ್ ಹಾಗೂ ಜೆಎಂಎಪ್‌ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

2017 ಮಾರ್ಚ್‌ 2ರಂದು ಅಪಘಾತ ನಡೆದಿತ್ತು. ರಮ್ಜಾನಸಾಬ ದಸ್ತಗಿರಿಸಾಬ ಸೈಯದ್ ಖಾನ್‌ ಚಲಾಯಿಸುತ್ತಿದ್ದ ಬಸ್‌ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸದಾಶಿವ ಖೋತ ಮೃತಪಟ್ಟಿದ್ದರು. ನಾಮದೇವ ಸೋಗಲೆ ಹಾಗೂ ಪಾಂಡುರಂಗ ಕಳಕರ ಎಂಬುವರು ಗಾಯಗೊಂಡಿದ್ದರು. ಅಂದಿನ ಪಿಐ ವಿಜಯ್ ಬಿರಾದಾರ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಝೀನತ್ ಬಾನು ಇಬ್ರಾಹಿಂಸಾಬ್ ಶೇಖ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ವಾದ– ಪ್ರತಿವಾದ ಆಲಿಸಿದನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಶಿಕ್ಷೆ ಪ್ರಕಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.