ಕಾರವಾರ: ‘ಸಮಾಜ ಸೇವೆಗೆ ಕುರ್ಚಿಯಲ್ಲಿ ಕುಳಿತಿಲ್ಲ ಎಂದು ಹೇಳಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ನಾಲಾಯಕ್’ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯದ ಬುನಾದಿಯೇ ಸಮಾಜ ಕಲ್ಯಾಣ ಆಗಿದೆ. ಆದರೆ, ಹೆಗಡೆ ತಾವು ಸಮಾಜ ಸೇವೆಗೆ ಬಂದಿಲ್ಲ, ರಾಜಕೀಯ ಮಾಡಲು ಮಾತ್ರ ಬಂದಿದ್ದೇನೆ ಎಂದಿದ್ದಾರೆ. ಆ ಮೂಲಕ ತಾವು ಅಪ್ರಬುದ್ಧರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ’ ಎಂದು ಹೇಳಿದರು.
‘ಪರೇಶ್ ಮೇಸ್ತ ಸಾವಿನ ಮೇಲೆ ಸಂಸದರು ರಾಜಕೀಯ ಮಾಡುತ್ತಿದ್ದಾರೆ. ಕರಾವಳಿ ಯುವಕರ ಕೈಗೆ ಕತ್ತಿಯನ್ನು ನೀಡಿ ರಾಜಕಾರಣ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಯುವಕರ ಮೇಲೆ ದಾಖಲಾಗಿರುವ ಕೇಸ್ಗಳ ಬಗ್ಗೆ ಅವರೀಗ ಮಾತನಾಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.