ADVERTISEMENT

ಎ.ಪಿ.ಎಂ.ಸಿ.ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:45 IST
Last Updated 29 ಮೇ 2020, 14:45 IST
ಕಾರವಾರ– ಅಂಕೋಲಾ ಎ.ಪಿ.ಎಂ.ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸಾಯಿನಾಥ ಶ್ರೀಕಾಂತ ನಾಯ್ಕ, ಗಣಪತಿ ಬೊಮ್ಮಯ್ಯ ನಾಯ್ಕ ಅವರನ್ನು ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಅಭಿನಂದಿಸಿದರು
ಕಾರವಾರ– ಅಂಕೋಲಾ ಎ.ಪಿ.ಎಂ.ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸಾಯಿನಾಥ ಶ್ರೀಕಾಂತ ನಾಯ್ಕ, ಗಣಪತಿ ಬೊಮ್ಮಯ್ಯ ನಾಯ್ಕ ಅವರನ್ನು ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಅಭಿನಂದಿಸಿದರು   

ಕಾರವಾರ:ಇಲ್ಲಿನಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎ.ಪಿ.ಎಂ.ಸಿ) ನೂತನ ಅಧ್ಯಕ್ಷರಾಗಿ ಸಾಯಿನಾಥ ಶ್ರೀಕಾಂತ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಗಣಪತಿ ಬೊಮ್ಮಯ್ಯ ನಾಯ್ಕ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎ.ಪಿ.ಎಂ.ಸಿ.ಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಇಬ್ಬರನ್ನುಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ನಾಯ್ಕ, ‘ರೈತರ ನೆರವಿಗೆ ಸರ್ಕಾರ ಸದಾ ಬದ್ಧವಾಗಿದೆ. ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಅಧ್ಯಕ್ಷ, ಉಪಾಧ್ಯಕ್ಷಹಾಗೂ ಸಮಿತಿ ಸದಸ್ಯರು ರೈತರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು. ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯರಾದ ವಿದ್ಯಾಧರ ಗಾಂವಕರ, ನಾರಾಯಣ ಹೆಗಡೆ, ಸುಬ್ರಾಯ ಸಿದ್ದಿ, ಸೀತಾ ಗೌಡ, ಪ್ರಸಾದ ಕಾಮತ, ಕುಷ್ಟಾ ಹುಲಸ್ವಾರ್‌, ಸುಜಾತಾ ದಳವಿ, ನಾಮ ನಿರ್ದೇಶಿತ ಸದಸ್ಯರಾದ ಮುರಾರಿ ಗಾಂವಕರ, ಉದಯ ನಾಯ್ಕ, ಮಂಗಲಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.