ಗೋಕರ್ಣ:ಇಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆಸುರಿದ ರಭಸದ ಮಳೆಯಿಂದ ಮಹಾಬಲೇಶ್ವರನ ಆತ್ಮಲಿಂಗ ನೀರಿನಲ್ಲಿ ಮುಳುಗಿತು. ಇದರಿಂದ ಸುಮಾರು ಎರಡು ಗಂಟೆ ಭಕ್ತರಿಗೆ ಪೂಜಾ ಅವಕಾಶವನ್ನು ನಿಲ್ಲಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ರಾಮದಿಂದ ಸಮುದ್ರಕ್ಕೆ ನಿರ್ಮಿಸಲಾದ ನಾಲೆಯಲ್ಲಿ ಹೂಳು ತುಂಬಿದೆ. ಅಲ್ಲದೇ ಕೆಲವು ದಿನಗಳಿಂದ ನಾಲೆಯಲ್ಲಿ ಸಮುದ್ರದ ನೀರು ಶೇಖರಣೆಯಾಗಿತ್ತು. ಇದರಿಂದ ಮಳೆ ನೀರು ಸಮುದ್ರಕ್ಕೆ ಹರಿಯದೇ ದೇವಸ್ಥಾನದ ಗರ್ಭಗುಡಿಯಕಾಲುವೆಯ ಮೂಲಕ ವಾಪಸ್ ಬಂತು.
ಇಂತಹ ಪ್ರಕರಣಗಳು ಪ್ರತಿ ವರ್ಷ ಮರುಕಳಿಸುತ್ತಿವೆ. ನಾಲೆಯಹೂಳೆತ್ತಬೇಕು. ಈ ಬಗ್ಗೆ ಹಲವು ವರ್ಷಗಳಿಂದ ಸ್ಥಳೀಯರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಸಂಸದರಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.