ADVERTISEMENT

ಶಿರಸಿ: ತಂತಿಬೇಲಿಗೆ ಸಿಲುಕಿ ಕಪ್ಪು ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 8:29 IST
Last Updated 27 ಆಗಸ್ಟ್ 2021, 8:29 IST
ಉರುಳಿಗೆ ಸಿಕ್ಕಿ ಮೃತಪಟ್ಟಿರುವ 4 ವರ್ಷದ ಹೆಣ್ಣು ಕಪ್ಪು ಚಿರತೆ
ಉರುಳಿಗೆ ಸಿಕ್ಕಿ ಮೃತಪಟ್ಟಿರುವ 4 ವರ್ಷದ ಹೆಣ್ಣು ಕಪ್ಪು ಚಿರತೆ   

ಶಿರಸಿ: ತಾಲ್ಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಬಳಿ ಕಾಡುಪ್ರಾಣಿ ಸೆರೆಗೆ ಹಾಕಿದ್ದ ಉರುಳಿಗೆ ಶುಕ್ರವಾರ ಕಪ್ಪು ಚಿರತೆಯೊಂದುಸಿಲುಕಿ ಮೃತಪಟ್ಟಿದೆ.

ಇದು4 ವರ್ಷದ ಹೆಣ್ಣು ಕಪ್ಪು ಚಿರತೆಯಾಗಿದ್ದು, ಉರುಳು ತಂತಿಯಿಂದಸೊಂಟದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ.ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿದೆ.

ನಸುಕಿನ ಜಾವ ಕಪ್ಪು ಚಿರತೆಯು ಬೇಲಿಗೆ ಸಿಲುಕಿ ಒದ್ದಾಡುವುದನ್ನು ಕಂಡಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು.

ADVERTISEMENT

'ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಪ್ರಯತ್ನ ನಡೆಯಿತು. ಜನ ಜಂಗುಳಿಯೂ ಹೆಚ್ಚಿತ್ತು. ಹೀಗಾಗಿ ಚಿರತೆ ಭಯದಿಂದಲೂ ಮೃತಪಟ್ಟಿರಬಹುದು' ಎಂದು ಆರ್.ಎಫ್.ಓ. ಉಷಾ ಕಬ್ಬೇರ ತಿಳಿಸಿದರು.

'ಪ್ರಾಣಿ ಹಿಡಿಯಲು ಉರುಳು ಹಾಕಿದವರ ಪತ್ತೆಗೆ ಮುಂದಾಗಿದ್ದೇವೆ' ಎಂದು ತಿಳಿಸಿದರು.

ಪಶು ವೈದ್ಯಾಧಿಕಾರಿ ಡಾ.ದಿನೇಶ ಕೆ.ಎನ್. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.