ADVERTISEMENT

‘ಪ್ರಜಾವಾಣಿ’ ವರದಿ ಫಲಶ್ರುತಿ: ರಾಜಕಾಲುವೆ ಕಾಮಗಾರಿ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 14:56 IST
Last Updated 5 ಜೂನ್ 2021, 14:56 IST
ಯಲ್ಲಾಪುರ ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ರಾಜಕಾಲುವೆಯ ಕಾಮಗಾರಿ ಶನಿವಾರ ಪುನರಾರಂಭವಾಗಿದೆ
ಯಲ್ಲಾಪುರ ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ರಾಜಕಾಲುವೆಯ ಕಾಮಗಾರಿ ಶನಿವಾರ ಪುನರಾರಂಭವಾಗಿದೆ   

ಯಲ್ಲಾಪುರ: ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ರಾಜ ಕಾಲುವೆ ಕಾಮಗಾರಿಯನ್ನು ಗುತ್ತಿಗೆದಾರ ಶನಿವಾರ ಪುನಃ ಆರಂಭಿಸಿದ್ದಾರೆ. ಕಾಂಕ್ರೀಟ್‌ನಿಂದ ಕಟ್ಟಿದ ಕಾಲುವೆಯ ಅಕ್ಕಪಕ್ಕದಲ್ಲಿ ಶನಿವಾರ ಮಣ್ಣು ಭರ್ತಿ ಮಾಡಿದ್ದಾರೆ.

ಕಾಂಕ್ರೀಟ್‌ನಿಂದ ನಿರ್ಮಿಸಿದ ರಾಜ ಕಾಲುವೆಯ ಕಾಮಗಾರಿ ಈಗಿನ ಅನುದಾನದಂತೆ ಅರ್ಧಕ್ಕೆ ನಿಲ್ಲಲಿದೆ. ಮಳೆ ನೀರು ಗದ್ದೆಗೆ ನುಗ್ಗದೇ ಕಾಲುವೆಯಲ್ಲಿ ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವುದು. ಗದ್ದೆಗೆ ನೀರು ನುಗ್ಗದಂತೆ ಮಣ್ಣಿನ ದಿಬ್ಬ ನಿರ್ಮಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಎಂಜಿನಿಯರ್ ಸುಫಿಯಾನಾ ಬ್ಯಾರಿ ತಿಳಿಸಿದ್ದಾರೆ.

ಅಪೂರ್ಣ ಕಾಮಗಾರಿಯಿಂದ ಹೊಲಗಳಿಗೆ ನೀರು ನುಗ್ಗಿ ರೈತರಿಗೆ ತೊಂದರೆಯಾಗುವ ಬಗ್ಗೆ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.