ADVERTISEMENT

ಅಗಸಾಲ ಬೊಮ್ಮನಳ್ಳಿ ವಿ.ಎಫ್.ಸಿ.ಗೆ ರಾಜ್ಯ ಪರಿಸರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 15:23 IST
Last Updated 6 ಜುಲೈ 2022, 15:23 IST
ಅಗಸಾಲ ಬೊಮ್ಮನಳ್ಳಿ ಗ್ರಾಮದಲ್ಲಿ ನಡೆದಿದ್ದ ಮಕ್ಕಳ ವೃಕ್ಷಜಾಥಾ (ಸಂಗ್ರಹ ಚಿತ್ರ)
ಅಗಸಾಲ ಬೊಮ್ಮನಳ್ಳಿ ಗ್ರಾಮದಲ್ಲಿ ನಡೆದಿದ್ದ ಮಕ್ಕಳ ವೃಕ್ಷಜಾಥಾ (ಸಂಗ್ರಹ ಚಿತ್ರ)   

ಶಿರಸಿ: ರಾಜ್ಯ ಸರ್ಕಾರ 2021–22ನೇ ಸಾಲಿಗೆ ನೀಡುವ ‘ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ಗೆ ತಾಲ್ಲೂಕಿನ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ ಆಯ್ಕೆಯಾಗಿದೆ.

ಮಲೆನಾಡು–ಕರಾವಳಿ ವಿಭಾಗದಲ್ಲಿ ಅರಣ್ಯ ಪರಿಸರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

‘15 ವರ್ಷದ ಹಿಂದೆ ಕೈಲಾಸ ಗುಡ್ಡ ರಕ್ಷಣೆಗಾಗಿ ನಡೆದ ಚಳವಳಿ ಸಂದರ್ಭದಲ್ಲಿ ಹುಟ್ಟಿದ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿಯು ಪರಿಸರ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದೆ. ಜಲಸಂವರ್ಧನೆ, ಬೆಟ್ಟ ಅಭಿವೃದ್ಧಿ, ಜೇನು ಕೃಷಿ, ಫಲ ವೃಕ್ಷವನ ಸೇರಿದಂತೆ ಹಲವು ಸುಸ್ಥಿರ ಅಭಿವೃದ್ಧಿ ಕಾಯಕದಲ್ಲಿ ಗ್ರಾಮದ ಯುವಜನತೆಯನ್ನು ಸಕ್ರಿಯವಾಗಿ ತೊಡಗಿಸಿದ್ದು ಗಮನಾರ್ಹ’ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಬಣ್ಣಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.