ADVERTISEMENT

ಹಲ್ಲೆ: ಐವರು ಅರಣ್ಯ ಸಿಬ್ಬಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 16:34 IST
Last Updated 10 ಫೆಬ್ರುವರಿ 2023, 16:34 IST

ಕಾರವಾರ: ಅರಣ್ಯ ಇಲಾಖೆಯ ದಿನಗೂಲಿ ನೌಕರರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕದ್ರಾ ವಲಯದ ಐವರು ಅರಣ್ಯ ಸಿಬ್ಬಂದಿ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಬಾರಗದ್ದೆಯ ರಮೇಶ ಬಡ್ಡೇಕರ (29) ಎಂಬುವವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ನೀಡಿದ್ದ ದೂರು ಆಧರಿಸಿ ಸುಳಗೇರಿ ವಲಯದ ಅರಣ್ಯ ಅಧಿಕಾರಿ ಗುರುಲಿಂಗಪ್ಪ, ಕದ್ರಾ ವಲಯದ ಗುರಪ್ಪ ಕುನ್ನೂರ, ಬಾರಗದ್ದೆ ವಲಯದ ಶಿವರಾಜ ಪಾಟೀಲ, ಬಾರಗದ್ದೆ ಬೀಟ್‍ನ ಅರಣ್ಯ ರಕ್ಷಕ ಚೌಡಪ್ಪ ಮತ್ತು ಕಮರಗಾಂವ ಬೀಟ್‍ನ ಪರಶುರಾಮ ಭಜಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಅಕ್ರಮವಾಗಿ ಕಟ್ಟಿಗೆ ದಾಸ್ತಾನು ಮಾಡಿಕೊಂಡಿದ್ದೇನೆ ಎಂದು ಸುಳ್ಳು ಆರೋಪ ಹೊರಿಸಿ ಕದ್ರಾ ಅಣೆಕಟ್ಟೆಯ ಹಿನ್ನೀರು ಪ್ರದೇಶದ ಬಳಿಯ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆಯಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದರು’ ಎಂದು ರಮೇಶ್ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.