ADVERTISEMENT

ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಅನಗತ್ಯ ಓಡಾಟ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 14:11 IST
Last Updated 9 ಏಪ್ರಿಲ್ 2020, 14:11 IST
ಶಿರಸಿ ಪೊಲೀಸರು ವಶಪಡಿಕೊಂಡಿರುವ ಕಾರು ಹಾಗೂ ಐವರು ಆರೋಪಿಗಳು
ಶಿರಸಿ ಪೊಲೀಸರು ವಶಪಡಿಕೊಂಡಿರುವ ಕಾರು ಹಾಗೂ ಐವರು ಆರೋಪಿಗಳು   

ಶಿರಸಿ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ, ಅನಾವಶ್ಯಕವಾಗಿ ತಿರುಗುತ್ತಿದ್ದ ಐವರನ್ನು ಗುರುವಾರ ಇಲ್ಲಿನ ಪೊಲೀಸರು ಬಂಧಿಸಿ, ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ರಾಘವೇಂದ್ರ ಸಿದ್ದಣ್ಣ ಕಂಬಳಿ, ರಾಹುಲ್ ಕೊಪ್ಪದ, ಅರ್ಜುನ ಕಾಂತು, ಅಕ್ಷಯ ರಾಜು ಬಡಗಣೆ ಹಾಗೂ ಶ್ರೀಧರ ರಾಣಗೇರ ಎಂಬುವವರನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಆದೇಶ ಉಲ್ಲಂಘಿಸಿ, ನೀಲೆಕಣಿ ಹತ್ತಿರ ಅನಾವಶ್ಯಕವಾಗಿ ಕಾರಿನಲ್ಲಿ ಓಡಾಡುತ್ತಿದ್ದಾ, ಸಿಪಿಐ ಪ್ರದೀಪ ಬಿ.ಯು, ಪಿಎಸ್‌ಐ ಶಿವಾನಂದ ನಾವದಗಿ ಹಾಗೂ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT