ADVERTISEMENT

ಭಟ್ಕಳ: ಭಾರಿ ಮಳೆಯಿಂದ ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:56 IST
Last Updated 3 ಜುಲೈ 2025, 13:56 IST
<div class="paragraphs"><p>ಭಟ್ಕಳದ ಬೈಲೂರು ನಿವಾಸಿ ಜಟ್ಟಮ್ಮ ದೇವಾಡಿಗ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ</p></div>

ಭಟ್ಕಳದ ಬೈಲೂರು ನಿವಾಸಿ ಜಟ್ಟಮ್ಮ ದೇವಾಡಿಗ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ

   

ಭಟ್ಕಳ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಕಿತ್ರ ನಿವಾಸಿ ಸುಕ್ರ ಗೋಯ್ದ ಗೊಂಡ ಅವರ ಮನೆಯ ಮಣ್ಣಿನ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ.

ಬೈಲೂರು ಗ್ರಾಮದ ಸಣ್ಣಬಲಸೆ ನಿವಾಸಿ ಜಟ್ಟಮ್ಮ ನಾರಾಯಣ ದೇವಾಡಿಗ ಅವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಮನೆಯ ಚಾವಣಿ  ಹಾಗೂ ಹೆಬಳೆ ಬೆಲೆಗದ್ದೆ ನಿವಾಸಿ ನಾರಾಯಣ ಬಡಿಯಾ ನಾಯ್ಕ ಅವರ ಚಾವಣಿ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ. ಕೊಪ್ಪ ನಿವಾಸಿ ದೇವಿ ಕೃಷ್ಣ ಮರಾಠಿ ಅವರ ಮನೆಯ ಮೇಲೆ ಗೇರು ಮರ ಭಾಗಶಃ ಹಾನಿಯಾಗಿದೆ.

ADVERTISEMENT

ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.