ADVERTISEMENT

ಹೊನ್ನಾವರ | ಸಮುದ್ರ ತಡೆಗೋಡೆ ಕುಸಿತ: ಸಚಿವರಿಂದ ಖುದ್ದು ಭೇಟಿಯ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:38 IST
Last Updated 7 ಜೂನ್ 2025, 14:38 IST
ಹೊನ್ನಾವರದಲ್ಲಿ ಶನಿವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ಎಸ್.ವೈದ್ಯ ಅಂಗವಿಕಲರಿಗೆ ಸರ್ಕಾರದಿಂದ ಮಂಜೂರಾದ ತ್ರಿಚಕ್ರ ವಾಹನ ವಿತರಿಸಿದರು
ಹೊನ್ನಾವರದಲ್ಲಿ ಶನಿವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ಎಸ್.ವೈದ್ಯ ಅಂಗವಿಕಲರಿಗೆ ಸರ್ಕಾರದಿಂದ ಮಂಜೂರಾದ ತ್ರಿಚಕ್ರ ವಾಹನ ವಿತರಿಸಿದರು   

ಹೊನ್ನಾವರ: ತಾಲ್ಲೂಕಿನ ಕರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಪ್ಪಲಕೇರಿ ಹಾಗೂ ಹೆಗಡೆಹಿತ್ಲ ಭಾಗದಲ್ಲಿ ಸುಮಾರು 1.5 ಕಿ.ಮೀ ಉದ್ದದ ಸಮುದ್ರ ತಡೆಗೋಡೆ ಕುಸಿದು ಸಮುದ್ರದ ನೀರು ತೋಟ- ಗದ್ದೆಗಳಿಗೆ ನುಗ್ಗಿ ಅಪಾಯ ಎದುರಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಶನಿವಾರ ಇಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ಎಸ್.ವೈದ್ಯ ಅವರಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡರು.

ಸಮಸ್ಯೆ ಆಲಿಸಿದ ಸಚಿವರು ‘ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು.

ರಸ್ತೆ, ಕಾಲುವೆ, ಶಾಲಾ ಕೊಠಡಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಚಿವರಿಗೆ ಮನವಿ ಸಲ್ಲಿಸಿದರು.

ADVERTISEMENT

ಅಂಗವಿಕಲರಿಗೆ ಸರ್ಕಾರದಿಂದ ಮಂಜೂರಾದ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.