ಶಿರಸಿ: ತಾಲ್ಲೂಕಿನ ಬನವಾಸಿಗೆ ಮಂಗಳವಾರ ಕದಂಬೋತ್ಸವ ಉದ್ಘಾಟನೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಣಕಿಸುವಂತೆ ಪಟ್ಟಣದ ಹಲವೆಡೆ ಪೇ ಸಿ.ಎಂ. ಪೋಸ್ಟರ್ ಸೋಮವಾರ ರಾತ್ರಿ ಅಂಟಿಸಲಾಗಿದೆ.
ರಾಜ್ಯದ ಹಲವೆಡೆ ನಡೆಯುತ್ತಿದ್ದ ಪೇ ಸಿಎಂ ಪೋಸ್ಟರ್ ಅಭಿಯಾನ ಈಗ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಸಿ.ಎಂ ಬರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪೋಸ್ಟರ್ ಅನ್ನು ಹಾಕಿ ಆಹಾರದ 'ಕಿಟ್ ಸ್ಕ್ಯಾಮ್ಗೆ ಪೇ ಸಿಎಂ ಮಾಡಿ' ಹಾಗೂ 'ಡೀಲ್ ನಿಮ್ದು, ಕಮಿಷನ್ ನಮ್ದು' ಎಂದು ಬರೆದು ಬನವಾಸಿಯ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರೆದಿದೆ.
ಇವನ್ನೂ ಓದಿ
* ಬನವಾಸಿ | ಕದಂಬೋತ್ಸವದ ಮುನ್ನಾದಿನ ಪಂಪ ಪ್ರಶಸ್ತಿ ಘೋಷಣೆ
* ಸಿಪಿಕೆ, ಬಾಬು ಕೃಷ್ಣಮೂರ್ತಿ, ಎಸ್.ಆರ್.ರಾಮಸ್ವಾಮಿಗೆ ಪಂಪ ಪ್ರಶಸ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.