ADVERTISEMENT

ಕೃಷ್ಣ ಜನ್ಮಾಷ್ಟಮಿ ಸರಳ ಆಚರಣೆ

ಪೆಟ್ಲೆಂಡೆ ಇಲ್ಲದ ಹಬ್ಬದಿಂದ ಮಕ್ಕಳಿಗೆ ಬೇಸರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:22 IST
Last Updated 12 ಆಗಸ್ಟ್ 2020, 15:22 IST
ಗೋಕರ್ಣದ ರಥಬೀದಿಯ ರಸ್ತೆಯಲ್ಲಿ ಕೃಷ್ಣಾಷ್ಟಮಿಯ ನಿಮಿತ್ತ ಪೆಟ್ಲೆ ಹೊಡೆದು ಸಂಭ್ರಮಿಸುತ್ತಿರುವ ಮಕ್ಕಳು.  
ಗೋಕರ್ಣದ ರಥಬೀದಿಯ ರಸ್ತೆಯಲ್ಲಿ ಕೃಷ್ಣಾಷ್ಟಮಿಯ ನಿಮಿತ್ತ ಪೆಟ್ಲೆ ಹೊಡೆದು ಸಂಭ್ರಮಿಸುತ್ತಿರುವ ಮಕ್ಕಳು.     

ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಯಿತು. ಭಕ್ತರು ಮಂಗಳವಾರ ಮತ್ತು ಬುಧವಾರ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ನಿರ್ದಿಷ್ಟಪಡಿಸಿದ್ದ ಸಮಯದಲ್ಲಿ ಪೂಜೆ ಸಲ್ಲಿಸಿದರು.

ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಬಾಲಕೃಷ್ಣನ ಬೆಳ್ಳಿಯ ಮೂರ್ತಿಯನ್ನು ಬೆಳ್ಳಿಯ ತೊಟ್ಟಿಲಲ್ಲಿ ಮಲಗಿಸಿ ಕೃಷ್ಣನ ಜನ್ಮಾಚರಣೆಯನ್ನು ಆಚರಿಸಲಾಯಿತು.

ಪುರಾತನ ಕಾಲದಿಂದ ೀ ಸಂದರ್ಭದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಭಜನಾ ಸಪ್ತಾಹವನ್ನು ಕೋವಿಡ್-19 ಕಾರಣಕ್ಕೆ ಈ ವರ್ಷ ಆಚರಿಸದೇ ಕೈಬಿಡಲಾಯಿತು. ಎಲ್ಲ ಸಮುದಾಯದವರು ಈ ಭಜನಾ ಸಪ್ತಾಹದಲ್ಲಿ ಭಾಗವಹಿಸುವುದು ಇಲ್ಲಿನ ವಿಶೇಷ.

ADVERTISEMENT

ಮಕ್ಕಳಿಗೆ ನಿರಾಸೆ ತಂದ ಹಬ್ಬ: ಈ ವರ್ಷದ ಕೃಷ್ಣಾಷ್ಟಮಿ ಹಬ್ಬ ಮಕ್ಕಳಿಗೆ ನಿರಾಸೆ ಉಂಟುಮಾಡಿತು. ಈ ಹಬ್ಬದ ದಿವಸ ಪೆಟ್ಲೆ ಹೊಡೆಯುವುದು ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈ ವರ್ಷ ಪೆಟ್ಲೆ ಅಂಡೆಗೆ ಉಪಯೋಗಿಸುವ ಜುಮ್ಮನ ಕಾಳು ಇನ್ನೂ ಆಗದಿರುವುದೇ ಮಕ್ಕಳು ಉತ್ಸಾಹದಿಂದ ಈ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಈ ಹಬ್ಬದಲ್ಲಿ ಪೆಟ್ಲೆ ಹೊಡೆದವನಿಗೆ ಖುಷಿಯಾದರೆ, ಹೊಡೆತ ತಿಂದವನಿಗೆ ಉರಿಯಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.