ADVERTISEMENT

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯ ಉಪವಾಸ ನಿರಶನ ಅಂತ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 7:12 IST
Last Updated 15 ಅಕ್ಟೋಬರ್ 2018, 7:12 IST

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ನಿರಶನವನ್ನು ಸೋಮವಾರ ಅಂತಿಮಗೊಳಿಸಿದ್ದಾರೆ.

ನಿರಶನ ನಿಲ್ಲಿಸುವಂತೆ ಪೇಜಾವರ ಶ್ರೀ, ಸುತ್ತೂರು ಶ್ರೀಗಳು, ಮುಖ್ಯಮಂತ್ರಿಗಳು,ರಾಜ್ಯ ಸರಕಾರದ ವಿವಿಧ ಮಂತ್ರಿಗಳು,ಅಷ್ಠಮಠ ಹಾಗೂ ನಾಡಿನ ವಿವಿಧ ಯತಿಗಳು ಮನವಿ ಮಾಡಿಕೊಂಡ ಮೇರೆಗೆ ಶ್ರೀಗಳು ಈ ತೀರ್ಮಾನ ಕೈಗೊಂಡಿದ್ದಾರೆ.

ಮಠದ ವಿರುದ್ದ ಕೆಲವರು ಆಪಾದನೆಗಳನ್ನು ಹೊರಿಸೊದ್ದರಿಂದ ಮನನೊಂದ ಶ್ರೀಗಳು ಕಳೆ ಮೂರು ದಿನಗಳಿಂದ ಉಪವಾಸ ಕೈಗೊಂಡಿದ್ದರು.

ADVERTISEMENT

ಸಮಸ್ಯೆ ತಿಳಿಗೊಳಿಸುವ ಕುರಿತು ಪೇಜಾವರ ಶ್ರೀ, ಮುಖ್ಯಮಂತ್ರಿ ಗಳು ಭರವಸೆ ನೀಡಿದ ಮೇರೆಗೆ ಶ್ರೀಗಳು 60ಗಂಟೆಗಳ ಉಪವಾಸದ ಬಳಿಕ ನಿರಶನ ನಿಲ್ಲಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.