ADVERTISEMENT

ಸಾವಗದ್ದೆ: ಹೆಣ್ಣು ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 16:53 IST
Last Updated 8 ಫೆಬ್ರುವರಿ 2023, 16:53 IST
ಯಲ್ಲಾಪುರ ತಾಲ್ಲೂಕಿನ ಸಾವಗದ್ದೆ ಸಮೀಪ ಪತ್ತೆಯಾದ ಚಿರತೆಯ ಮೃತದೇಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು
ಯಲ್ಲಾಪುರ ತಾಲ್ಲೂಕಿನ ಸಾವಗದ್ದೆ ಸಮೀಪ ಪತ್ತೆಯಾದ ಚಿರತೆಯ ಮೃತದೇಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು   

ಯಲ್ಲಾಪುರ: ತಾಲ್ಲೂಕಿನ ಸಾವಗದ್ದೆ ಸಮೀಪ ಬುಧವಾರ ಹೆಣ್ಣು ಚಿರತೆಯೊಂದರ ಮೃತ ದೇಹ ದೊರೆತಿದೆ.

ಆನಗೊಡದಿಂದ ಸಾವಗದ್ದೆಗೆ ಸಾಗುವ ಮಾರ್ಗದ ಅರಣ್ಯ ಪ್ರದೇಶದಲ್ಲಿ ಚಿರತೆ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವುದೇ ಸಂಶಯ ಕಂಡುಬಂದಿಲ್ಲ. ವಯೋಸಹಜ ಕಾಯಿಲೆಯಿಂದ ಚಿರತೆ ಮೃತಪಟ್ಟಿದ್ದಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ’ ಎಂದು ಡಿಸಿಎಫ್ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.