ADVERTISEMENT

ನಾಪತ್ತೆಯಾಗಿದ್ದ ಕುಮಟಾ ಪುರಸಭೆ ನೌಕರ ಬೆಳಗಾವಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:17 IST
Last Updated 10 ಅಕ್ಟೋಬರ್ 2025, 1:17 IST
ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ಭಟ್ಕಳದಿಂದ ಕಾಣೆಯಾದ ಕುಮಟಾ ಪುರಸಭೆ ಸಿಬ್ಬಂದಿ ವೆಂಕಟೇಶ ಪೊಲೀಸರ ಜೊತೆ ಸರಕ್ಷಿತವಾಗಿದ್ದಾರೆ
ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ಭಟ್ಕಳದಿಂದ ಕಾಣೆಯಾದ ಕುಮಟಾ ಪುರಸಭೆ ಸಿಬ್ಬಂದಿ ವೆಂಕಟೇಶ ಪೊಲೀಸರ ಜೊತೆ ಸರಕ್ಷಿತವಾಗಿದ್ದಾರೆ   

ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಕುಮಟಾದ ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅವರ ಕಿರುಕುಳದ ಬಗ್ಗೆ ಪತ್ರ ಬರೆದು ನಾಪತ್ತೆಯಾಗಿದ್ದ ಕಂದಾಯ ಅಧಿಕಾರಿ, ಭಟ್ಕಳ ನಿವಾಸಿ ವೆಂಕಟೇಶ ಆರ್. ಗುರುವಾರ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾರೆ.

‘ಪತ್ತೆಗೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ವೆಂಕಟೇಶ್ ಅವರು ತಮ್ಮ ತಾಯಿಗೆ ಕರೆ ಮಾಡಿ, ಬೆಳಗಾವಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದರು. ಅವರನ್ನು ಪತ್ತೆ ಮಾಡಿದ ಬೆಳಗಾವಿ ಪೊಲೀಸರು, ಠಾಣೆಗೆ ಕರೆಸಿಕೊಂಡಿದ್ದಾರೆ. ಅವರನ್ನು ಭಟ್ಕಳಗೆ ಕರೆತರಲು ಸ್ಥಳೀಯ ಪೊಲೀಸರು ತೆರಳಿದ್ದಾರೆ’ ಎಂದು ಭಟ್ಕಳ ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT