ADVERTISEMENT

ಕಾಂಗ್ರೆಸ್‌ಗೆ ಪ್ರಾಶಸ್ತ್ಯದ ಮತ ನೀಡಬೇಡಿ:

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:52 IST
Last Updated 30 ನವೆಂಬರ್ 2021, 4:52 IST
ಗೋಕರ್ಣದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಮಾತನಾಡುತ್ತಿರುವ ಸಚಿವ ಶಿವರಾಮ ಹೆಬ್ಬಾರ್.  
ಗೋಕರ್ಣದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಮಾತನಾಡುತ್ತಿರುವ ಸಚಿವ ಶಿವರಾಮ ಹೆಬ್ಬಾರ್.     

ಗೋಕರ್ಣ: ಬಿಜೆಪಿ ಅಭ್ಯರ್ಥಿಗೆ ಮಾತ್ರ ಮತ ನೀಡಿ. ಪ್ರಾಶಸ್ತ್ಯದ ಮತ ಕಾಂಗ್ರೆಸ್ ಅಬ್ಯರ್ಥಿಗೆ ನೀಡಬೇಡಿ. ಒಂದು ವೇಳೆ ಪ್ರಾಶಸ್ತ್ಯದ ಮತ ಕಾಂಗ್ರೆಸ್ ಅಭ್ಯರ್ಥಿಗೆ ನೀಡಿದರೆ ಅವರ ಮೌಲ್ಯ ಜಾಸ್ತಿಯಾಗಿ ನಮ್ಮ ಅಭ್ಯರ್ಥಿಗೇ ಕಷ್ಟ ವಾಗುತ್ತದೆ ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಸೋಮವಾರ ವಿಧಾನಪರಿಷತ್ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿದರು. ಪ್ರತಿ ಚುನಾವಣೆಯಲ್ಲಿಯೂ ಸರ್ಕಾರವಿದ್ದ ಪಕ್ಷದ ಅಬ್ಯರ್ಥಿಯೇ ಗೆಲವು ಸಾಧಿಸಿದ್ದಾರೆ. ಆದ್ದರಿಂದ ಈ ಸಲ ಬಿಜೆಪಿ ಅಬ್ಯರ್ಥಿಯೇ ಗೆಲವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ, ಒಬ್ಬರು ಮಾತ್ರ ಕಾಂಗ್ರೆಸ್ ಪಕ್ಷದವರು. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಬ್ಯರ್ಥಿಯನ್ನೇ ಗೆಲ್ಲಿಸಬೇಕಾಗಿದೆ. ಎಲ್ಲರೂ ತಪ್ಪದೇ ಮತದಾನದಲ್ಲಿ ಭಾಗವಹಿಸಿ ಎಂದರು.

ADVERTISEMENT

ಗೋಕರ್ಣ, ತೊರ್ಕೆ, ಹನೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಂಜುನಾಥ ಜನ್ನು, ಆನಂದು ಕವರಿ, ಭಾರತಿ ಗೌಡ, ಬಿ.ಜೆ.ಪಿ. ಪ್ರಮುಖರಾದ ವಿನೋದ ಪ್ರಭು, ನಾಗರಾಜ ನಾಯಕ ತೊರ್ಕೆ, ಎಮ್.ಜಿ.ಭಟ್, ನಾಗರಾಜ ಹಿತ್ತಲಮಕ್ಕಿ ಇದ್ದರು. ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಜನ್ನು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.