ADVERTISEMENT

ಯಲ್ಲಾಪುರ: ಸುಂಕಸಾಳ ಸಮೀಪ ಹೋಟೆಲ್‌‌ನಲ್ಲಿ ಸಿಲುಕಿದ ನಾಲ್ವರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 10:18 IST
Last Updated 23 ಜುಲೈ 2021, 10:18 IST
ಸುಂಕಸಾಳ ಬಳಿ ಕಾರು ಮುಳುಗಡೆಯಾಗಿರುವುದು
ಸುಂಕಸಾಳ ಬಳಿ ಕಾರು ಮುಳುಗಡೆಯಾಗಿರುವುದು    

ಕಾರವಾರ/ ಯಲ್ಲಾಪುರ: ಅಂಕೋಲಾ ತಾಲ್ಲೂಕಿನ ಸುಂಕಸಾಳ, ಅಗಸೂರು ಬಳಿಯ ನವಮಿ ಹೋಟೆಲ‌್‌ನ ಎರಡನೇ ಮಹಡಿ ಮೇಲೆ ಬೆಂಗಳೂರಿನ ನಾಲ್ವರು ಗುರುವಾರದಿಂದ ಸಿಕ್ಕಿ ಹಾಕಿಕೊಂಡಿದ್ದಾರೆ. ಕಾರು ಕೊಚ್ಚಿಹೋಗದಂತೆ ಹಗ್ಗ ಹಾಕಿ ಕಟ್ಟಿ ಇಟ್ಟಿದ್ದರು.

ಏರುತ್ತಿರುವ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ಜಿಲ್ಲಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಏರ್ ಲಿಫ್ಟ್ ಮಾಡುವ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಬಂದಿದೆ.

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ 11 ಗೇಟ್‌ಗಳ ಪೈಕಿ 10 ಗೇಟ್‌ಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 7 ಗಂಟೆಯ ಮಾಹಿತಿಯಂತೆ, ಕಾಳಿ ನದಿಗೆ 81,285 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಸಮೀಪದ ಕುರ್ನಿಪೇಟೆ, ಮಲ್ಲಾಪುರ ಗ್ರಾಮದ ಹಲವು ಪ್ರದೇಶಗಳು ಮುಳುಗಡೆಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.