ADVERTISEMENT

ಸಮುದ್ರದಾಳದಲ್ಲಿ ಗುರುತಿನ ಚೀಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 14:45 IST
Last Updated 21 ಏಪ್ರಿಲ್ 2019, 14:45 IST
ಭಟ್ಕಳದ ನೇತ್ರಾಣಿ ನಡುಗಡ್ಡೆಯ ಬಳಿ ಸ್ಕೂಬಾ ಡೈವ್ ಮಾಡುತ್ತಲೇ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ (ಎಡ ಭಾಗದಲ್ಲಿರುವವರು) ಅವರಿಂದ ಮತದಾರರ ಗುರುತಿನ ಚೀಟಿ ಪಡೆದುಕೊಂಡ ಯುವ ಮತದಾರ
ಭಟ್ಕಳದ ನೇತ್ರಾಣಿ ನಡುಗಡ್ಡೆಯ ಬಳಿ ಸ್ಕೂಬಾ ಡೈವ್ ಮಾಡುತ್ತಲೇ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ (ಎಡ ಭಾಗದಲ್ಲಿರುವವರು) ಅವರಿಂದ ಮತದಾರರ ಗುರುತಿನ ಚೀಟಿ ಪಡೆದುಕೊಂಡ ಯುವ ಮತದಾರ   

ಕಾರವಾರ:‌ ಉತ್ತರ ಕನ್ನಡ ಜಿಲ್ಲೆಯ ನಾಲ್ವರು ಯುವ ಮತದಾರರುಭಟ್ಕಳದ ನೇತ್ರಾಣಿನಡುಗಡ್ಡೆಯಸಮೀಪ ಸ್ಕೂಬಾ ಡೈವಿಂಗ್‌ ಮಾಡುತ್ತಲೇ ಸಮುದ್ರದಲ್ಲಿ ಭಾನುವಾರ ಅಧಿಕಾರಿಗಳಿಂದ ಗುರುತಿನ ಚೀಟಿ ಪಡೆದುಕೊಂಡರು.

ಜಿಲ್ಲಾಡಳಿತ ಯುವ ಮತದಾರರಿಗಾಗಿ ಈ ವ್ಯವಸ್ಥೆ ಮಾಡಿತ್ತು. ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ವಿನಾಯಕ ನಾಯಕ, ಮುಟ್ಟಳ್ಳಿಯ ರೂಪೇಶ ನಾಯ್ಕ, ಮಾವಳ್ಳಿಯ ವಿಘ್ನೇಶ ದೇವಾಡಿಗಹಾಗೂ ಗಣೇಶ ದೇವಾಡಿಗ ಅವರು ಈ ವೇಳೆ ಗುರುತಿನ ಚೀಟಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಡಾ.ಕೆ.ಹರೀಶಕುಮಾರ್,ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೆಲೋಟ್, ಪ್ರೊಬೆಷನರಿ ಐಎಎಸ್ ಅಧಿಕಾರಿ ದಿಲಿಶ್ ಸಸಿ, ಪ್ರೊಬೆಷನರಿ ಐಪಿಎಸ್ ಅಧಿಕಾರಿಗಳಾದ ತುಷಾರ್ ದುಡಿ ಹಾಗೂ ಪಿ.ಶ್ರೇಷ್ಠಅವರೂ ಸ್ಕೂಬಾ ಡೈವ್ ಮಾಡಿದರು.

ADVERTISEMENT

‘ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದುಈ ವೇಳೆ ಡಾ.ಕೆ.ಹರೀಶಕುಮಾರ್ ಹಾಗೂ ಮೊಹಮ್ಮದ್ ರೋಷನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.